ಉಡುಪಿ ವಲಯ ಪ್ರೌಢಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

Update: 2023-08-11 14:46 GMT

ಕಾಪು, ಆ.11: ಶಂಕರಪುರ ಸೈಂಟ್ ಜೋನ್ಸ್ ಪೌಢಶಾಲೆಯಲ್ಲಿ ಆಯೋಜಿಸ ಲಾದ ಉಡುಪಿ ವಲಯ ಮಟ್ಟದ ಪೌಢಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಧರ್ಮಗುರು ರೆ.ಫಾ ವಿಜಯ್ ಡಿಸೋಜ, ಸೈಂಟ್ ಜೋನ್ಸ್ ಚರ್ಚಿನ ಪಾಲನ ಸಮಿತಿ ಉಪಾಧ್ಯಕ್ಷ ಜೋನ್ ಮಾರ್ಟಿಸ್, ಕಾರ್ಯದರ್ಶಿ ಗಾಬ್ರಿಯಲ್ ಮಾರ್ಟಿಸ್, ಕ್ರೀಡಾಕೂಟದ ಮುಖ್ಯ ಪ್ರಾಯೋಜಕ ಫ್ರಾನ್ಸಿಸ್ ಪ್ರಕಾಶ್ ಡಿಸೋಜ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್.ಆಚಾರ್ಯ, ಸದಸ್ಯರಾದ ಅಶೋಕ್ ರಾವ್, ಪ್ಲಾವಿಯಾ ಮಿನೇಜಸ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲ್ ಶೆಟ್ಟಿ, ಸಿ.ಆರ್.ಪಿ ಅಚ್ಚಡ ಕ್ಲಸ್ಟರೆನ್, ಶಾಲಾ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೊಡ್ರಿಗಸ್, ತಾಲ್ಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಸುವರ್ಣ ಹಾಗೂ ಜೋಸೆಫ್ ಕಸ್ತೆಲಿನೊ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News