ವಸಂತಕಲಾ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Update: 2023-11-02 14:06 GMT

ಉಡುಪಿ, ನ.2: ಪರಿಪೂರ್ಣತೆಗಾಗಿ ಸದಾ ಹಾತೊರೆಯುವ ಮನಸ್ಸು. ಹೊಸತನ್ನು ಹುಡುಕುವ ಹಸಿವು. ಕಲಾ ಕಲಿಕೆಗೆ ಮುಕ್ತ ಮನಸ್ಸು ವಸಂತಲಕ್ಷ್ಮಿ ಅವರ ಕಲಾ ಸಾಧನೆಯ ಯಶಸ್ಸಿನ ಸೂತ್ರಗಳು ಎಂದು ಮುಂಬೈಯ ಚಿತ್ರ ಕಲಾವಿದೆ ಶರ್ಮಿಳಾ ಗುಪ್ತೆ ಹೇಳಿದ್ದಾರೆ.

ಕಲಾವಿದೆ ವಸಂತಲಕ್ಷ್ಮೀ ಅಗಲಿದ ಒಂದು ವರ್ಷದಲ್ಲೇ ಅವರ ಚಿತ್ರಕಲಾ ಯಾತ್ರೆಯನ್ನು ಸಾರುವ ವಸಂತ ಕಲಾ ಚಿತ್ರ ಕಲಾ ಪ್ರದರ್ಶನವನ್ನು ಬುಧವಾರ ಕುಂಜಿಬೆಟ್ಟು ಅದಿತಿ ಗ್ಯಾಲರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚಿತ್ರಕಲಾ ಶಿಷ್ಯೆಯಾಗಿ ಅವರ ಸಾಧನೆ ಅವಿಸ್ಮರಣೀಯ. ವಸಂತಲಕ್ಷ್ಮೀ ಅವರ ಕಲಾಕೃತಿಗಳು ಶಾಶ್ವತವಾಗಿ ಜನ ಮಾನಸದಲ್ಲಿ ಉಳಿಯಲಿ ಎಂದು ಹಾರೈಸಿದರು.

ದೃಷ್ಟಿ ಆರ್ಟ್ ಗ್ಯಾಲರಿಯ ಮುಖ್ಯಸ್ಥ ರಮೇಶ್ ರಾವ್ ಮಾತನಾಡಿ ವಸಂತಲಕ್ಷ್ಮಿ ಕೇವಲ ಚಿತ್ರ ಕಲಾವಿದೆ ಮಾತ್ರವಲ್ಲ ವರ್ಣಗಳ ಒಡನಾಟವನ್ನೂ ಸಮರ್ಪಕವಾಗಿ ಬಳಸಿಕೊಂಡಿದ್ದರು. ಅವರ ಕಲಾಕೃತಿಗಳು ಶಾಶ್ವತವಾಗಿ ವೀಕ್ಷಿಸಲು ಸಾಧ್ಯವಾಗುವ ಹಾಗೆ ಯೋಜನೆಗಳು ರೂಪಿಸಬೇಕು ಎಂದು ಸಲಹೆ ನೀಡಿದರು.

ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ.ಕಿರಣ್ ಆಚಾರ್ಯ ಸ್ವಾಗತಿಸಿದರು. ರಾಜಮೋಹನ್ ವಾರಂಬಳ್ಳಿ ವಂದಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್‌ನ ಅರವಿಂದ ಹೆಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಷ್ಯೆಯರಾದ ಸಮನ್ವಿ, ಅರ್ಚನಾ ಹಾಗೂ ಗಾರ್ಗಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಬಳಿಕ ಕಲಾವಿದೆ ವಸಂತಲಕ್ಷ್ಮೀ ಅವರ ಕುರಿತಾಗಿ ನಿರ್ಮಿಸಲಾದ ವಿಡಿಯೋ ಪ್ರದರ್ಶನ ಜರಗಿತು. ಸುಮಾರು ಎಪ್ಪತ್ತು ಕಲಾಕೃತಿಗಳು ಪ್ರದರ್ಶನಗೊಂಡವು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News