ಮೆಸ್ಕಾಂ ಲೈನ್‌ಮೆನ್ ಮಲಗಿದಲ್ಲಿಯೇ ಮೃತ್ಯು

Update: 2024-09-15 15:39 GMT

ಕಾಪು, ಸೆ.15: ಮೆಸ್ಕಾಂ ಪಡುಬಿದ್ರಿ ಶಾಖೆಯಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಉದ್ಯಾವರ ಗ್ರಾಮದ ಕಿಶೋರ್ ಕುಮಾರ್(49) ಎಂಬವರು ರಾತ್ರಿ ಮಲಗಿದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕಳೆದ 20 ವರ್ಷಗಳಿಂದ ಲೈನ್‌ಮೆನ್ ಆಗಿದ್ದ ಇವರು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸೆ.14ರಂದು ರಾತ್ರಿ ಮಲಗಿದ್ದ ಅವರು, ಬೆಳಗ್ಗೆ ಎಬ್ಬಿಸುವಾಗ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News