ರಾಜ್ಯಪಾಲರ ಕಾರ್ಕಳ ಭೇಟಿ ರದ್ದು

Update: 2024-01-17 16:42 GMT

ಉಡುಪಿ: ಅನಿವಾರ್ಯ ಕಾರಣಗಳಿಂದ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಾಳೆ (ಜ.18) ಕಾರ್ಕಳಕ್ಕೆ ನೀಡಬೇಕಿದ್ದ ಭೇಟಿ ಹಾಗೂ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ರಾಜಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರು ನಾಳೆ ಸಂಜೆ ಕಾರ್ಕಳದಲ್ಲಿ ನವೀಕೃತ ಆನೆಕೆರೆ ಬಸದಿಯನ್ನು ಹಾಗೂ ಪಂಚಕಲ್ಯಾಣ ಫೆಸ್ಟಿವಲ್‌ನ್ನು ಉದ್ಘಾಟಿಸುವ ಕಾರ್ಯಕ್ರಮವಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News