ಬಂಡವಾಳಶಾಹಿ ಪಕ್ಷದ ನೀತಿಗಳನ್ನು ಸೋಲಿಸಿ: ಸುರೇಶ್ ಕಲ್ಲಾಗರ
Update: 2024-10-06 12:11 GMT
ಕುಂದಾಪುರ, ಅ.6: ಕಾರ್ಮಿಕ ವರ್ಗದ ಪಕ್ಷದ ನೀತಿಗಳನ್ನು ಜನರ ಮಧ್ಯೆ ಹೆಚ್ಚು ಹೆಚ್ಚು ಪ್ರಚಾರ ಮಾಡಿ ಬಂಡವಾಳಶಾಹಿ ಪಕ್ಷದ ನೀತಿಗಳನ್ನು ಸೋಲಿಸಬೇಕು ರೈತ ಕೂಲಿಕಾರರ, ಮಹಿಳೆಯರ ಸಮಸ್ಯೆಗಳನ್ನು ಸಮ್ಮೇಳನಗಳಲ್ಲಿ ಚರ್ಚಿಸಿ ಹೋರಾಟ ರೂಪಿಸಬೇಕು ಎಂದು ಸಿಪಿಎಂ ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಕರ್ಕಿಯಲ್ಲಿ ನಡೆದ ಗ್ರೀನ್ ಲ್ಯಾಂಡ್ ಹಂಚು ಕಾರ್ಮಿಕರ ಸಿಪಿಎಂ ಶಾಖಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಿಪಿಎಂ ಪಕ್ಷದ ಹಿರಿಯ ಸದಸ್ಯ ಸಂಜೀವ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಗುಲ್ವಾಡಿ ಸ್ಥಳೀಯ ಸಮಿತಿ ಸದಸ್ಯ ಚಂದ್ರ ಪೂಜಾರಿ ಮಾತನಾಡಿದರು. ಅಧ್ಯಕ್ಷತೆ ಸುಧಾಕರ ಪೂಜಾರಿ ವಹಿಸಿದ್ದರು. ಕಾರ್ಯದರ್ಶಿ ಸುರೇಶ್ ಕರ್ಕಿ ವರದಿ ಮಂಡಿಸಿದರು. ರಾಜು ಡಿ ಸ್ವಾಗತಿಸಿದರು. ಹರೀಶ ಬಾಡಬೆಟ್ಟು ವಂದಿಸಿದರು.