ಆಯತಪ್ಪಿ ಬಿದ್ದು ಗಾರೆ ಕೆಲಸಗಾರ ಮೃತ್ಯು

Update: 2024-10-07 16:14 GMT

ಬೈಂದೂರು: ಗಾರೆ ಕೆಲಸ ಮಾಡುವ ವೇಳೆ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮರವಂತೆ ಗ್ರಾಮದ ಖಾಸಿಂ (55) ಎಂದು ಗುರುತಿಸಲಾಗಿದೆ. ಇವರು ನಾವುಂದ ಗ್ರಾಮದ ಬಡಾಕೆರೆಯಲ್ಲಿ ರುವ ಮನೆ ಕಾಮ ಗಾರಿಯ ಕೆಲಸವನ್ನು ವಹಿಸಿಕೊಂಡಿದ್ದು, ಸೆ.28ರಂದು ಸಿಲಿಂಗ್ ಗಾರೆ ಮಾಡಲು ಮರದ ಅಟ್ಟಿಗೆಯನ್ನು ಕಟ್ಟಿ ಕಿಟಕಿಯಿಂದ ಕೆಳಗೆ ಇಳಿಯುವಾಗ ಆಯತಪ್ಪಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಅ.೬ರಂದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News