ಹಿರಿಯ ಬಸ್ ಏಜೆಂಟ್ ಆತ್ಮಹತ್ಯೆ

Update: 2025-04-08 21:37 IST
ಹಿರಿಯ ಬಸ್ ಏಜೆಂಟ್ ಆತ್ಮಹತ್ಯೆ
  • whatsapp icon

ಉಡುಪಿ, ಎ.8: ವೈಯಕ್ತಿಕ ಕಾರಣದಿಂದ ಮನನೊಂದ ಹಿರಿಯ ಬಸ್ ಏಜೆಂಟ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ವೇಳೆ ಬನ್ನಂಜೆ ಎಂಬಲ್ಲಿ ನಡೆದಿದೆ.

ಮೃತರನ್ನು ಬನ್ನಂಜೆ ನಿವಾಸಿ ಮಂಜುನಾಥ(67) ಎಂದು ಗುರುತಿಸಲಾಗಿದೆ. ಹಿರಿಯ ಬಸ್ ಏಜೆಂಟ್ ಆಗಿರುವ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬದಿಯಲ್ಲಿರುವ ರಾಜಗೋಪಾಲ ಎಂಬವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News