ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣ| ಡ್ರಗ್ಸ್ ಪೂರೈಸಿದ ಮತ್ತೋರ್ವ ಆರೋಪಿಗೆ ತೀವ್ರ ಶೋಧ

Update: 2024-08-31 15:30 GMT

ಉಡುಪಿ, ಆ.31: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈಗಾಗಲೇ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಬೆಂಗಳೂರಿನಲ್ಲಿ ಡ್ರಗ್ಸ್ ನೀಡಿದ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪ್ರಕರಣದ ಬಂಧಿತ ಆರೋಪಿಗಳಾದ ಗಿರಿರಾಜು ಜಗಾಧಾಬಿ ಹಾಗೂ ಜಾನ್ ನೊರೋನ್ಹಾ ಈ ಮೊದಲು ಕುವೈತ್‌ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಗಿರಿರಾಜು, ಜಾನ್ ನೊರೋನ್ಹಾನಿಗೆ ಕರೆ ಮಾಡಿ ಡ್ರಗ್ಸ್ ಸಿಗುವ ಬಗ್ಗೆ ಕೇಳಿದ್ದು, ಜಾನ್ ನೊರೋನ್ಹಾ ಗಿರಿರಾಜುನನ್ನು ಉಡುಪಿಗೆ ಬರಲು ತಿಳಿಸಿದ್ದನು. ಅದರಂತೆ ಗಿರಿರಾಜು ಉಡುಪಿಗೆ ಬಂದಿದ್ದು, ಡಗ್ಸ್ ಸಂಬಂಧ ಜಾನ್ ನೊರೋನ್ಹಾ ಕಾರ್ಕಳದ ಶಾಹಿದ್ ಎಂಬಾತನನ್ನು ಗಿರಿರಾಜುಗೆ ಪರಿಚಯಿಸಿದ್ದನು.

ಶಾಹಿದ್ ಸ್ಥಳೀಯವಾಗಿ ಸುಮಾರು ಒಂದು ತಿಂಗಳಿಂದ ಸಿಂಥೆಟಿಕ್ ಡ್ರಗ್ಸ್‌ಗೆ ಪ್ರಯತ್ನಿಸಿದ್ದು, ಸಿಗದ ಕಾರಣ ಅಭಯ್‌ನನ್ನು ಸಂಪರ್ಕಿಸಿದ್ದನು. ಅಭಯ್ ಈ ಮೊದಲು ಕೆಲಸ ಮಾಡಿಕೊಂಡಿರುವ ಬೆಂಗಳೂರಿನಲ್ಲಿ ಡ್ರಗ್ಸ್ ಸಿಗುವ ಬಗ್ಗೆ ಖಚಿತ ಪಡಿಸಿಕೊಂಡು, ಶಾಹಿದ್ ಹಾಗೂ ಗಿರಿರಾಜುನನ್ನು ಬೆಂಗಳೂರಿಗೆ ಬರಲು ತಿಳಿಸಿದ್ದನು. ಕಾರ್ಕಳದಿಂದ ಶಾಹಿದ್, ಅಲ್ತಾಫ್ ಮತ್ತು ಅಭಯ್ ಬೆಂಗಳೂರಿಗೆ ತೆರಳಿದ್ದು, ಅಲ್ಲಿ ಒಬ್ಬ ವ್ಯಕ್ತಿಯಿಂದ ಡ್ರಗ್ಸ್‌ನ್ನು ಖರೀದಿ ಮಾಡಿ, ಗಿರಿರಾಜುಗೆ ನೀಡಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ.

ಅದರಲ್ಲಿ ಸ್ವಲ್ಪ ಡ್ರಗ್ಸ್‌ನ್ನು ಅಲ್ತಾಫ್ ತಂದಿದ್ದು, ಅದೇ ಡ್ರಗ್ಸ್‌ನ್ನು ಆತ ಅತ್ಯಾಚಾರ ಪ್ರಕರಣದ ಯುವತಿಗೆ ನೀಡಿದ್ದನು. ಉಳಿದ ಡ್ರಗ್ಸ್‌ನ್ನು ಅಲ್ತಾಫ್‌ನ ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಗಿರಿರಾಜು ಬಳಿಯಿಂದ ಎಂಡಿಎಂಎ ಡ್ರಗ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News