ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2024-09-17 15:55 GMT

ಶಂಕರನಾರಾಯಣ: ಬೆನ್ನು ನೋವಿನಿಂದ ಬಳಲುತ್ತಿದ್ದ ವಂಡಾರು ಗ್ರಾಮದ ಪುಟ್ಟಯ್ಯ ಎಂಬವರ ಮಗ ಸತೀಶ್(33) ಎಂಬವರು ಸೆ.16ರಂದು ಮಧ್ಯಾಹ್ನ ವೇಳೆ ಮನೆಯ ರೂಮ್‌ನಲ್ಲಿ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಕಾಲು ಗಂಟು ಹಾಗೂ ಸೊಂಟದ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಹೆಗ್ಗುಂಜೆ ಗ್ರಾಮದ ನಡುಜೆಡ್ಡು ನಿವಾಸಿ ರಘುರಾಮ (81) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.17ರಂದು ಮಧ್ಯಾಹ್ನ ಮನೆಯ ಹತ್ತಿರ ಇರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News