ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಲೋಕಸಭೆಯಲ್ಲಿ ಬಿಜೆಪಿ 400ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲಬೇಕಿದೆ: ಅನಂತ್ ಕುಮಾರ ಹೆಗಡೆ

Update: 2024-03-10 07:21 GMT

Photo: fb.com/ Ananthumarhegde

ಸಿದ್ದಾಪುರ: ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾದರೆ ಲೋಕಸಭೆಯಲ್ಲಿ ಬಿಜೆಪಿ 400ಕ್ಕಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲಬೇಕಾಗಿದೆ ಎಂದು ಸಂಸದ ಅನಂತ್ ಕುಮಾರ ಹೆಗಡೆ ಹೇಳಿದ್ದಾರೆ.

ತಾಲೂಕಿನ ಹಲಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‍ ನವರು ಸಂವಿಧಾನದಲ್ಲಿ ಬೇಡದ್ದೆನ್ನೆಲ್ಲ ಸೇರಿಸಿದ್ದಾರೆ. ನಮ್ಮ ದೇಶ ಬದಲಾಗಬೇಕಾದರೆ ಹಿಂದೂಗಳಿಂದ ಮಾತ್ರ ಸಾಧ್ಯ. ಜಾತ್ಯತೀತರು ಎನ್ನುವವರಿಂದ ಇದು ಸಾಧ್ಯವಿಲ್ಲ. ಆದ್ದರಿಂದ ಹಿಂದುತ್ವದ ಅಭಿಲಾಷೆಯುಳ್ಳವರು ಬಿಜೆಪಿಗೆ ಮತ ನೀಡಬೇಕು ಎಂದರು.

‘ಸಾವಿರ ವರ್ಷಗಳಿಂದೀಚೆಗೆ ಹಿಂದೂ ಸಮಾಜ ತುಳಿಯಲ್ಪಡುತ್ತಿದೆ. ಈಗ ಉತ್ತರ ಕೊಡುವ ಸ್ಥಾನಕ್ಕೆ ಬಂದಿದ್ದೇವೆ. ಜಗತ್ತು ನಮ್ಮ ಕಡೆಗೆ ತಿರುಗಿ ನೋಡುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News