ಅ.25: ಸಕಲೇಶಪುರದಲ್ಲಿ ಮಾದಕ ವ್ಯಸನದ ಕುರಿತು ಜನ ಜಾಗೃತಿ ಅಭಿಯಾನ
Update: 2024-10-21 11:52 GMT
ಸಕಲೇಶಪುರ: ಮಾದಕ ವ್ಯಸನ ಪ್ರಕರಣಗಳ ಕುರಿತು ಸಮಾಜದಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ SKSSF ಹಾಸನ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಮರ್ಪಿತವಾದ ವಿಖಾಯ ಕಾರ್ಯಕರ್ತರ ಸಮ್ಮುಖದಲ್ಲಿ ಅ. 25ರ ಮಧ್ಯಾಹ್ನ 3ಕ್ಕೆ ಪಟ್ಟಣದ ತೇಜಸ್ವಿ ಸರ್ಕಲ್ ನಿಂದ ಹಳೇ ಬಸ್ ನಿಲ್ದಾಣದವರೆಗೆ ಜನಜಾಗೃತಿ ಕಾಲ್ನಡಿಗೆ ಜಾತ ಕೈಗೊಂಡಿದೆ.
ಮಾದಕ ವ್ಯಸನದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳು, ಅನೈತಿಕತೆಯ ಹಾದಿಯ ಬಗ್ಗೆ ಸಕಲೇಶಪುರದಲ್ಲಿ ಹೆಚ್ಚಿನ ಅರಿವು ಮೂಡಿಸುವ ಜವಬ್ದಾರಿಯಿಂದ ಸಂಘಟನೆ ಈ ಕಾರ್ಯಕ್ರಮ ಮಾಡುತಿದ್ದು, ಸಕಲೇಶಪುರದ ಸರ್ವರನ್ನೂ SKSSF ಹಾಸನ ಜಿಲ್ಲಾ ಸಮಿತಿಯು ಆಹ್ವಾನಿಸುತಿದ್ದು ಉತ್ತಮ ಸಮಾಜಕ್ಕಾಗಿ ಎಲ್ಲರೂ ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದೆ.