ಗುರುಪುರ ಸೇತುವೆ ಬಳಿ ಅಪಘಾತ: ನಿರ್ಲಕ್ಷ್ಯದ ಚಾಲನೆಗೆ ದಂಡ ಹಾಕಿದ ಪೊಲೀಸರು

Update: 2023-10-19 17:22 GMT

ಮಂಗಳೂರು, ಅ.19: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಸೇತುವೆಯ ಬಳಿ ರವಿವಾರ ಅಪರಾಹ್ನ ಅಮಿತ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಉರುಳಿ ಬಿದ್ದ ದೃಶ್ಯವು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ, ಕಾರು ಚಾಲಕ ಬಂಟ್ವಾಳ ಜೋಡುಮಾರ್ಗದ ಪಿಎಸ್ ಮುಹಮ್ಮದ್ ವಿರುದ್ಧ ಬಜ್ಪೆ ಪೊಲೀಸರು ದುಡುಕು ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಿ 3 ಸಾವಿರ ರೂ. ದಂಡ ವಿಧಿಸಿದ್ದಾರೆ.

ಅಮಿತ ವೇಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಬಿದ್ದಿರುವ ದೃಶ್ಯವು ಗುರುವಾರ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News