ಆ.14: ಶಿವಮೊಗ್ಗ ಮಸ್ನವೀ ಮದ್ರಸದಲ್ಲಿ ಪ್ರಾರ್ಥನಾ ಸಂಗಮ

Update: 2024-08-12 17:04 GMT

ಮಂಗಳೂರು, ಆ.12: ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಮಂಗಳೂರಿನ ಮಸ್ನವಿ ಗ್ಲೋಬಲ್ ಅಕಾಡಮಿ (ರಿ) ವತಿಯಿಂದ ನಡೆಯುತ್ತಿರುವ ಮಸ್ನವಿ ಶೈಬಾನಿಯಾ ಮದ್ರಸದಲ್ಲಿ ಆ.14ರ ಬೆಳಗ್ಗೆ 10ಕ್ಕೆ ಮೆಹಫಿಲೇ ರಬ್ಬಾನಿ ಪ್ರಾರ್ಥನಾ ಸಂಗಮ ನಡೆಯಲಿದೆ.

ಮದ್ರಸಕ್ಕೆ ಸ್ಥಳವಕಾಶ ನೀಡಿದ ನಗರದ ಪ್ರಮುಖ ಉದ್ಯಮಿ ಹಾಜಿ ನಈಮ್ ಸೇಟ್ ಅವರ ಪತ್ನಿ ಶಬಾನಾ ಯಾಸ್ಮಿನ್ ಇತೀಚೆಗೆ ಅಗಲಿದ್ದು, ಅವರ ಹೆಸರಲ್ಲಿ ವಿಶೇಷ ದುಆ ಮಜ್ಲಿಸ್ ಕೂಡ ಇದರ ಅಂಗವಾಗಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮಂಗಳೂರು ಮಸ್ನವಿ ಗ್ಲೋಬಲ್ ಅಕಾಡಮಿ(ರಿ)ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ನೇತೃತ್ವ ನೀಡಲಿದ್ದಾರೆ. ಜನರಲ್ ಮೆನೇಜರ್ ನೌಫಲ್ ಮದನಿ ನೇಜಾರ ಸಂದೇಶ ಭಾಷಣ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News