ಸಂತ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಮಹಿಳೆಯರ ಆತ್ಮರಕ್ಷಣೆಗಾಗಿ ಕಾರ್ಯಾಗಾರ

ಮಂಗಳೂರು : ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಮಾರ್ಷಲ್ ಆರ್ಟ್ಸ್ (ಐಕೆಎಂಎ) ಸಹಯೋಗದೊಂದಿಗೆ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಎಂ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಜೆಪ್ಪುವಿನ ಸಂವಾದ ಯುವ ಸಂಪನ್ಮೂಲ ಕೇಂದ್ರದಲ್ಲಿ "ದಿ ಪವರ್ ವಿಥಿನ್" ಎಂಬ ಮಹಿಳಾ ಸ್ವರಕ್ಷಣೆಗಾಗಿ ಕಾರ್ಯಾಗಾರ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಮಾರ್ಷಲ್ ಆರ್ಟ್ಸ್ (ಐಕೆಎಂಎ) ಯ ಮುಖ್ಯ ತರಬೇತುದಾರ ನಿತಿನ್ ಎನ್. ಸುವರ್ಣ ಅವರು ಮಾತನಾಡಿ, ಸ್ವರಕ್ಷಣೆ ಒಂದು ಸಹಜ ಭಾವನೆ, ಆದರೆ ಅಗತ್ಯ ಬರುವಾಗ ಅದನ್ನು ಪ್ರದರ್ಶಿಸಲು ಸಾಕಷ್ಟು ಆತ್ಮವಿಶ್ವಾಸ ಮತ್ತು ಸರಿಯಾದ ಕೌಶಲ್ಯ ಇದ್ದಾಗ ಮಾತ್ರ ಸಾಧ್ಯ, ಅಪಾಯದಲ್ಲಿರುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯವಿರುವ ಕೌಶಲ್ಯಗಳನ್ನು ಹೊರತರಲು ಇಂತಹ ಕಾರ್ಯಕ್ರಮವು ಒಂದು ವೇದಿಕೆಯಂತೆ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ನಲ್ಲಿ ರಾಷ್ಟ್ರೀಯ ಮಟ್ಟದ ಪದಕ ವಿಜೇತರಾದ ಅಶ್ನಿ, ಅವ್ನಿ ಮತ್ತು ಜಾನ್ವಿ ಅವರು ವಿವಿಧ ತಂತ್ರಗಳು ಮತ್ತು ಸ್ವರಕ್ಷಣೆಯ ರೀತಿಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು.
ಯುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಮತ್ತು ಪ್ರಾತ್ಯಕ್ಷಿತೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕೆಲ ಪುರುಷರೂ ಭಾಗವಹಿಸಿದ್ದು, ಮಹಿಳೆಯರಿಗೆ ಜೊತೆ ನಡೆದುಕೊಳ್ಳುವಲ್ಲಿ ಸಮಾನತೆಯ ಅಗತ್ಯದ ಬಗ್ಗೆ ಅವರಿಗೆ ತಿಳುವಳಿಕೆ ನೀಡಲಾಯಿತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಪ್ರಶ್ನೋತ್ತರ ದೊಂದಿಗೆ ಆತ್ಮರಕ್ಷಣೆಯ ಬಗ್ಗೆ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು.
ಕಾರ್ಯಕ್ರಮದ ಶಿಕ್ಷಕ ಸಂಚಾಲಕರಾಗಿ ವಿಲ್ಸನ್ ಮತ್ತು ಅಶ್ವಿನಿ ಮತ್ತು ವಿದ್ಯಾರ್ಥಿ ಸಂಚಾಲಕರಾಗಿ ಕಶ್ಯಪ್ ಕಾರ್ಯ ನಿರ್ವಹಿಸಿದರು.

