ಬೆಳ್ತಂಗಡಿ: ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್‌ನ ಮಹಾಸಭೆ

Update: 2023-08-21 13:08 GMT

ಬೆಳ್ತಂಗಡಿ, ಆ.21: ಇಲ್ಲಿನ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ನ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.

ಮೂಸಾ ದಾರಿಮಿ ತೋಡಾರ್ ಸಭೆಯನ್ನು ಉದ್ಘಾಟಿಸಿದರು. ಸಿರಾಜ್ ಮಾಸ್ಟರ್ ಲೆಕ್ಕ ಪತ್ರ ವಾಚಿಸಿದರು.

ಇದೇ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಕಾರ್ಯಾಧ್ಯಕ್ಷರಾಗಿ ಬಶೀರ್ ದಾರಿಮಿ, ಕಾರ್ಯದರ್ಶಿಯಾಗಿ ಅಹ್ಮದ್ ಹುಸೈನ್ ಮೂಡುಬಿದಿರೆ, ಕೋಶಾಧಿಕಾರಿ ಯಾಗಿ ಅಬ್ದುರ್ರಝಾಕ್ ಕನ್ನಡಿಕಟ್ಟೆ ಹಾಗೂ ವುಮೆನ್ಸ್ ಕಾಲೇಜು ಅಧ್ಯಕ್ಷರಾಗಿ ಅಬ್ದುಲ್ ನಝೀರ್ ಬಿ.ಎ. ಬೆಳ್ತಂಗಡಿ, ಕನ್ವೀನರ್ ರಾಗಿ ಬಿ.ಎಚ್. ರಝಾಕ್ ಬೆಳ್ತಂಗಡಿ ಆಯ್ಕೆಯಾದರು.

ಇದೇ ವೇಳೆ ಸಂಸ್ಥೆಯ 7ನೇ ವಾರ್ಷಿಕೋತ್ಸವ ಹಾಗೂ ಶೈಖುನಾ ಶಂಸುಲ್ ಉಲಮಾ (ಖ.ಸಿ) ಉರೂಸ್ ಮುಬಾರಕ್ ನ ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು. ನವೆಂಬರ್ 12ರವರೆಗೆ ನಡೆಯುವ ಒಂದು ತಿಂಗಳ 'ಇತ್ತಿಸಾಲ್ 2' ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಬಶೀರ್ ದಾರಿಮಿ ಸ್ವಾಗತಿಸಿದರು ನೂತನ ಕಾರ್ಯದರ್ಶಿ ಅಹ್ಮದ್ ಹುಸೈನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News