ಮುಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್‌ನ ಸದಸ್ಯತನ ಅಭಿಯಾನಕ್ಕೆ ಉತ್ತಮ ಸ್ಪಂದನೆ: ಮಿಥುನ್ ರೈ

Update: 2024-08-15 15:57 GMT

ಹಳೆಯಂಗಡಿ: ರಾಜ್ಯದಲ್ಲಿಯೇ ಯುವ ಕಾಂಗ್ರೆಸ್‌ನ ಸಂಘಟನಾತ್ಮಕ ಶಕ್ತಿಗೆ ಬಲ ತುಂಬಿತ್ತಲಿರುವ ಯುವ ಸಮುದಾಯವು ಹೆಚ್ಚೆಚ್ಚು ಸದಸ್ಯರಾಗಿ ರಾಜಕೀಯದ ಮೂಲಕ ಸಮಾಜ ಸೇವೆಯನ್ನು ಮಾಡಬೇಕು ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.

ಅವರು ಹಳೆಯಂಗಡಿಯ ಮುಲ್ಕಿ ಬ್ಯಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್‌ನ ಮುಲ್ಕಿ ಮತ್ತು ಮೂಡಬಿದಿರೆ ಬ್ಲಾಕ್‌ನ ಯುವ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವ ಸಮುದಾಯವನ್ನು ರಾಜಕೀಯವಾಗಿ ವೇದಿಕೆ ನೀಡಿ ಅವರಿಗೆ ಸಾಮರಸ್ಯದ ರಾಜಕಾರಣವನ್ನು ಕಲ್ಪಿಸುವ ಉದ್ದೇಶ ದಿಂದ ಕಾಂಗ್ರೆಸ್ ಪಕ್ಷದ ಮಹತ್ವದ ಅಭಿಯಾನವಾದ ಯುವ ಕಾಂಗ್ರೆಸ್ ಸದಸ್ಯತನ ಅಭಿಯಾನವು ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಯಶಸ್ಸಾಗುವುದು ನಿಶ್ವಿತ ಎಂದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮೋಹನ್ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್ ಅವರು ಯುವ ಕಾಂಗ್ರೆಸ್‌ನ ಅಭಿಯಾನ ಹಾಗೂ ಸದಸ್ಯರಾದವರ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು.

ಕಾಂಗ್ರೆಸ್‌ನ ವಿವಿಧ ಘಟಕಗಳ ನಾಯಕರಾದ ಚಂದ್ರಹಾಸ ಸನಿಲ್, ಸಾಹುಲ್ ಹಮೀದ್ ಕದಿಕೆ, ಮಂಜುನಾಥ ಕಂಬಾರ್, ಜಾಕ್ಸನ್, ಮೋಕ್ಷಾ, ಆದರ್ಶ ಮತ್ತಿತರರು ಉಪಸ್ಥಿತರಿದ್ದರು. ಮುಲ್ಕಿ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್ ಸ್ವಾಗತಿಸಿ, ನಿರೂಪಿಸಿ, ಧನ್ಯವಾದ ಸಮರ್ಪಿಸಿದರು‌.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News