ಮದನಿಯ್ಯ ಸಾದಾತ್ ಫೌಂಡೇಶನ್ನಿಂದ ಸಹಾಯಧನ
Update: 2025-03-07 17:41 IST

ಮಂಗಳೂರು : ಮದನಿಯ್ಯ ಸಾದಾತ್ ಫೌಂಡೇಶನ್, ಕರ್ನಾಟಕ ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಾದಾತ್ ಕುಟುಂಬದ ವಿದ್ಯಾರ್ಥಿಗಳ ಸಮನ್ವಯ ಶಿಕ್ಷಣ ಅಭಿವೃದ್ಧಿಗಾಗಿ 85,000 ರೂ.ಗಳ ಚೆಕ್ ಅನ್ನು ಪಿ.ಕೆ.ಬಾದುಷಾ ಸಖಾಫಿ ಆಲಪ್ಪುಝ ಹಾಗೂ ಯು.ಟಿ.ಇಫ್ತಿಕಾರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮದನಿಯ್ಯ ಸಾದಾತ್ ಫೌಂಡೇಶನ್ನ ಅಧ್ಯಕ್ಷರಾದ ಸೈಯದ್ ಜವಾದ್ ತಂಳ್, ಸೈಯದ್ ಖುಬೈಬ್ ತಂಳ್, ಕಾರ್ಯದರ್ಶಿ ಹಂಝ ಉಳ್ಳಾಲ, ಶಮ್ಮಾಸ್ ಹಾಶಿಮಿ ಉಪ್ಪಿನಂಗಡಿ, ಸಮೀರ್ ಸೇವಂತಿಗುಡ್ಡೆ ಉಪಸ್ಥಿತರಿದ್ದರು.