ʼಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಕರ್ನಾಟಕʼದಿಂದ ಹುಬ್ಬುನ್ನಬಿ ಕಾರ್ಯಕ್ರಮ

Update: 2024-09-24 11:53 GMT

ಮಂಗಳೂರು: ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಶನಿವಾರ ಪೂರ್ವಾಹ್ನ 11:30ಕ್ಕೆ ನಂದರಬೆಟ್ಟು ಆರಿಫ್ ವಿಲ್ಲಾದಲ್ಲಿ ಮೌಲಿದ್ ಪಾರಾಯಣ ಹಾಗೂ ಮಿಲಾದುನ್ನಬಿ ಕಾರ್ಯಕ್ರಮ ಜರುಗಿತು.

ಸಮಿತಿಯ ಗೌರವಾಧ್ಯಕ್ಷ, ಸಮಸ್ತ ಮುಶಾವರ ಸದಸ್ಯ ಅಲ್ ಹಾಜ್ ಕೆ.ಎಂ.ಉಸ್ಮಾನುಲ್ ಫೈಝಿ ವಹಿಸಿದ್ದರು. ಬಳಿಕ ಸಮಿತಿಯ ಅಧ್ಯಕ್ಷ ಹಾಜಿ ಬಿ.ಎಂ.ಬಾವ ಮದನಿಯವರ ಅಧ್ಯಕ್ಷತೆಯಲ್ಲಿ ಚರ್ಚಾಕೂಟ ನಡೆಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಲ್ ಹಾಜ್ ಮಾಹಿನ್ ದಾರಿಮಿ, ಅಲ್ ಹಾಜ್ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಹಾಗೂ ಕೋಶಾಧಿಕಾರಿ ಅಬೂಸಿರಾಜ್ ಅಬೂಬಕರ್ ಮುಸ್ಲಿಯಾರ್ ಮಾತನಾಡಿದರು.

ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ ನಂದಾವರ, ಅಲ್ ಹಾಜ್ ಪಿ.ಕೆ. ಅಬ್ದುಲ್ ಮಜೀದ್ ಮದನಿ, ಅಲ್ ಹಾಜ್ ಇಕ್ಬಾಲ್ ಹನೀಫಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಪರ್ಲಿಯಾ, ಅಬ್ದುಲ್ ಕರೀಂ ಮುರ್ಶಿದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಟಿ.ಎಂ.ಹನೀಫ್ ಮುಸ್ಲಿಯಾರ್ ವಂದಿಸಿದರು.



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News