ಕೊಪ್ಪ: ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಬೈಕ್ ಜಾಥಾ

Update: 2023-09-04 16:16 GMT

ಕೊಪ್ಪ, ಸೆ.4: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್‌ನ 50ನೇ ವರ್ಷದ ಸಂಭ್ರಮಾಚರಣೆಯನ್ನು ‘ನಾವು ಭಾರತೀಯರು’ ಎಂಬ ಧ್ಯೇಯದೊಂದಿಗೆ ಸೆ.10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರಚಾರಾರ್ಥ ಕೊಪ್ಪ ಪಟ್ಟಣದಲ್ಲಿ ಎಸ್ಸೆಸ್ಸೆಫ್ ಕೊಪ್ಪಡಿವಿಷನ್ ಮಟ್ಟದ ಬೈಕ್ ಜಾಥಾ ನಡೆಯಿತು.

ಕೊಪ್ಪದ ವಾಟರ್ ಟ್ಯಾಂಕ್‌ನಿಂದ ಹೊರಟ ಜಾಥಾವು ಬಸ್ ನಿಲ್ದಾಣದ ಮುಂಭಾಗದಲ್ಲಿ ಸಮಾವೇಶಗೊಂಡು ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮ ಜರುಗಿತು.

ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಸದಸ್ಯಸಫ್ವಾನ್ ಸಖಾಫಿ ಶಾಂತಿಪುರ ಮಾತನಾಡಿ ಶುಭ ಹಾರೈಸಿದರು.

ಎಸ್ಸೆಸ್ಸೆಫ್ ರಾಜ್ಯ ನಾಯಕ ಶರೀಫ್ ಕುದುರೆಗುಂಡಿ ಮಾತನಾಡಿ, ಸೆ.10ರಂದು ಬೆಂಗಳೂರಿನಲ್ಲಿ ನಡೆಯುವ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಎಸ್ಸೆಸ್ಸೆಫ್ ಕೊಪ್ಪಡಿವಿಷನ್ ಅಧ್ಯಕ್ಷ ಉಸ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಪ್ಪದ ಮುಹಿಯದ್ದೀನ್ ಜುಮಾ ಮಸೀದಿಯ ಉಸ್ತಾದರುಗಳು, ಕೊಪ್ಪ ರೆನ್ ಸುನ್ನೀ ಯುವಜನ ಸಂಘ ಅಧ್ಯಕ್ಷ ಹುಸೈನ್ ಸಅದಿ , ಎಸ್‌ವೈಎಸ್ ಕರ್ನಾಟಕ ರಾಜ್ಯ ಸದಸ್ಯ ಸುಲೈಮಾನ್, ಶೃಂಗೇರಿ ರೆನ್ ಸುನ್ನೀ ಯುವಜನ ಸಂಘ ಅಧ್ಯಕ್ಷ ಸ್ವಾದಿಕ್, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಸಲೀಮ್ ಮತ್ತಿತರರು ಭಾಗವಹಿಸಿದ್ದರು.

ಶರ್ಫುದ್ದೀನ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಕೊಪ್ಪಡಿವಿಷನ್ ಪ್ರಧಾನ ಕಾರ್ಯದರ್ಶಿ ಬಾಕಿರ್ ವಂದಿಸಿದರು.


 






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News