ಮಡಪ್ಪಾಡಿ : ಕೆರೆಗೆ ಬಿದ್ದು ಕೃಷಿಕ ಮೃತ್ಯು
Update: 2024-08-23 16:34 GMT
ಸುಳ್ಯ: ತೋಟಕ್ಕೆ ತೆಂಗಿನಕಾಯಿ ಹೆಕ್ಕಲು ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಮಡಪ್ಪಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಡಪ್ಪಾಡಿ ಗ್ರಾಮದ ವಿಶ್ವನಾಥ ಗೋಳ್ಯಾಡಿ (60) ಮೃತ ವ್ಯಕ್ತಿ.
ಶುಕ್ರವಾರ 11 ಗಂಟೆಯ ವೇಳೆಗೆ ವಿಶ್ವನಾಥರವರು ತೆಂಗಿನಕಾಯಿ ಹೆಕ್ಕಲೆಂದು ತೋಟಕ್ಕೆ ಹೋಗಿದ್ದರು. ಮಧ್ಯಾಹ್ನದವರೆಗೆ ಅವರು ಬಾರದಿದ್ದಾಗ ಮನೆಯವರು ತೋಟಕ್ಕೆ ಹುಡುಕಾಡಿದರು. ಈ ವೇಳೆ ತೆಂಗಿನಕಾಯಿ ತರಲೆಂದು ತೆಗೆದುಕೊಂಡು ಹೋಗಿದ್ದ ಕೈಗಾಡಿ ಕೆರೆಯ ಬಳಿ ಕಂಡುಬಂದಿದೆ. ಕೆರೆಯಲ್ಲಿ ನೋಡಿದಾಗ ವಿಶ್ವನಾಥರ ದೇಹ ತೇಲುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಸೇರಿ ಕೆರೆಯಿಂದ ದೇಹವನ್ನು ಮೇಲಕ್ಕೆತ್ತುವ ವೇಳೆಗೆ ಕೊನೆಯುಸಿರೆಳೆದ್ದರು. ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.