ಮಂಗಳೂರು: ಸಹಕಾರ ಸಂಘದ ಕಚೇರಿಯಿಂದ ಹಣ ಕಳವು

Update: 2023-11-17 17:59 GMT

ಸಾಂದರ್ಭಿಕ ಚಿತ್ರ (PTI)

ಮಂಗಳೂರು: ನಗರದ ಪಂಪ್‌ವೆಲ್ ಬಳಿಯ ನವಯುಗ ಕ್ರೆಡಿಟ್ ಸೌಹಾರ್ದ ಸಹಕಾರದ ತಿಜೋರಿಯಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘದ ಮ್ಯಾನೇಜರ್ ಹಾಗೂ ಅಭಿವೃದ್ಧಿ ವ್ಯವಸ್ಥಾಪಕರು ಗುರುವಾರ ಸಂಜೆ 5:45ಕ್ಕೆ ಚಿನ್ನಾಭರಣ ಮತ್ತು ಹಣವನ್ನು ಲಾಕರ್ ರೂಮ್‌ನ ತಿಜೋರಿಯಲ್ಲಿಟ್ಟು ಲಾಕ್ ಮಾಡಿ ಕೀಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕೊಠಡಿಯ ಮೇಜಿನ ಡ್ರಾವರ್‌ನಲ್ಲಿಟ್ಟು ಶಟರ್ ಬಂದ್ ಮಾಡಿ ಹೋಗಿದ್ದರು.

ಶುಕ್ರವಾರ ಬೆಳಗ್ಗೆ 9:40ಕ್ಕೆ ಸಂಘದ ಅಧ್ಯಕ್ಷರು ಮತ್ತು ಸಿಬ್ಬಂದಿ ಬಂದು ಬಾಗಿಲು ತೆರೆದು ನೋಡಿದಾಗ ಕಳ್ಳರು ಕಿಟಕಿಯ ಸರಳುಗಳನ್ನು ತುಂಡು ಮಾಡಿ ಡ್ರಾವರ್‌ನಲ್ಲಿದ್ದ ಕೀಯ ಸಹಾಯದಿಂದ ತಿಜೋರಿಯ ಬಾಗಿಲು ತೆರೆದು 7 ಲ.ರೂ. ಮೌಲ್ಯದ ಚಿನ್ನಾಭರಣ ಮತ್ತು 57,832 ರೂ. ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News