ಮಂಗಳೂರು: ಝೀನತ್ ಭಕ್ಷ್ಗೆ ಪದ್ಮರಾಜ್ ಭೇಟಿ
Update: 2024-04-03 12:39 GMT
ಮಂಗಳೂರು, ಎ.4: ನಗರದ ಬಂದರ್ನಲ್ಲಿರುವ ಮಸ್ಜಿದ್ ಝೀನತ್ ಭಕ್ಷ್ಗೆ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಇತ್ತೀಚೆಗೆ ಸೌಹಾರ್ದ ಭೇಟಿ ನೀಡಿದರು.
ಈ ಸಂದರ್ಭ ಝೀನತ್ ಭಕ್ಷ್ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಮಸೀದಿಯ ಉಪಾಧ್ಯಕ್ಷ ಕೆ. ಅಶ್ರಫ್, ಕೋಶಾಧಿಕಾರಿ ಹಾಜಿ ಎಸ್.ಎಂ.ರಶೀದ್ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಸ್ಸಮದ್, ಅದ್ದು ಹಾಜಿ, ಹಾಜಿ ಐ. ಮೊಯಿದಿನಬ್ಬ, ಹಾಜಿ ಯೂಸುಫ್ ಕರ್ದರ್ ಮತ್ತಿತರು ಉಪಸ್ಥಿತರಿದ್ದರು.