ಶಾಸಕ ಐವನ್ ಡಿಸೋಜರಿಗೆ ಸನ್ಮಾನ

Update: 2024-06-11 13:04 GMT

ಮಂಗಳೂರು, ಜೂ.11: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ವತಿಯಿಂದ ದ್ವಿತೀಯ ಬಾರಿಗೆ ರಾಜ್ಯ ವಿಧಾನ ಪರಿಷತ್ತಿನ ಶಾಸಕರಾಗಿ ಆಯ್ಕೆಯಾದ ಐವನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿ ಸೋಜ ಕಲಾವಿದರ ಹಿತರಕ್ಷಣೆಯ ನೆಲೆಯಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಕಲಾವಿದರಿಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಅಭಿನಂದನಾ ಕಾವ್ಯ ವಾಚಿಸಿದರು. ಕಾರ್ಯಾಧ್ಯಕ್ಷ ಯು.ಹೆಚ್. ಖಾಲಿದ್ ಉಜಿರೆ ಅಭಿನಂದನಾ ಭಾಷಣ ಮಾಡಿದರು. ಉಪಾಧ್ಯಕ್ಷ ಅಝೀಝ್ ಕಂದಾವರ, ಕೋಶಾಧಿಕಾರಿ ಸಮದ್ ಕಾಟಿಪಳ್ಳ, ಸೌಂಡ್ ವೇವ್ ರೆಕಾರ್ಡಿಂಗ್ ಸ್ಟುಡಿಯೋದ ಮಾಲಕ ಫೈಝ್ ಕಾಟಿಪಳ್ಳ, ದ.ಕ.ಜಿಪಂ ಮಾಜಿ ಸದಸ್ಯ ಯು.ಬಿ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News