ಪುತ್ತೂರು | ಬೈಕ್ ಢಿಕ್ಕಿ: ಪಾದಚಾರಿಗೆ ಗಾಯ

Update: 2024-06-19 06:42 GMT

ಸಾಂದರ್ಭಿಕ ಚಿತ್ರ

ಪುತ್ತೂರು, ಜೂ.19: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಢಿಕ್ಕಿಯಾಗಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮದ ಪಂಚೋಡಿ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿವಾಸಿ, ಪ್ರಸಕ್ತ ನೆಟ್ಟಣಿಗೆಮುಡ್ನೂರು ಎಂಬಲ್ಲಿ ವಾಸ್ತವ್ಯವಿರುವ ಬಸವರಾಜ (37) ಗಾಯಗೊಂಡವರು. ಅವರು ಈಶ್ವರಮಂಗಲ- ಪಳ್ಳತ್ತೂರು ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು, ಪಂಚೋಡಿ ಕಡೆ ಅಂಗಡಿಗೆಂದು ಹೋಗುತ್ತಿದ್ದ ವೇಳೆಯಲ್ಲಿ ಪಂಚೋಡಿ ಸಮೀಪ ಅವರ ಹಿಂದಿನಿಂದ ಆಗಮಿಸಿದ ಅಫ್ಸಲ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿಯಾಗಿದೆ.

ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News