ನವೀಕೃತ ಮೀಫ್ ಕಛೇರಿ ಉದ್ಘಾಟನೆ, ಗಣ್ಯರಿಗೆ ಸನ್ಮಾನ

Update: 2024-09-17 06:52 GMT

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಎಜ್ಯುಕೇಶನಲ್ ಇನ್ಸ್ಟಿಟ್ಯೂಶನ್ಸ್ ಫೆಡರೇಶನ್ (ಮೀಫ್) ಇದರ ಬಾವುಟಗುಡ್ಡೆಯಲ್ಲಿರುವ ನವೀಕೃತ ಕಛೇರಿ ಉದ್ಘಾಟನೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ಇಂದು ತಾ.18.09.2024 ರಂದು ಅಪರಾಹ್ನ 02:00 ಗಂಟೆಗೆ ಕಛೇರಿಯ ವಠಾರದಲ್ಲಿ ನಡೆಯಲಿದೆ.

ಕಛೇರಿ ಉದ್ಘಾಟನೆಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಲಿರುವರು. ಯೇನಪೋಯ ಅಬ್ದುಲ್ಲ ಕುಂಞಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.

ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೀಫ್ ಗೌರವಾಧ್ಯಕ್ಷ ಉಮರ್ ಟಿ.ಕೆ ಅವರು ಸಾಂದರ್ಭಿಕವಾಗಿ ಮಾತನಾಡಲಿದ್ದಾರೆ. ಮೀಫ್ ನ ಗೌರವ ಸಲಹೆಗಾರ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಪ್ರಸ್ತಾವಿಕ ಮಾತುಗಳನ್ನಾಡಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜ, ಹಾಗೂ N.C.A.H ಚೆಯರ್ಮ್ಯಾನ್ ಡಾ. ಯು.ಟಿ.ಇಫ್ತಿಖಾರ್ ಫರೀದ್ ರವರು ಸನ್ಮಾನಿಸಲ್ಪಡುವರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಎ. ಸಿ ವಿನಯ್ ರಾಜ್ , ಝಕರಿಯಾ ಜೋಕಟ್ಟೆ , ಎಸ್. ಎಮ್ ರಶೀದ್ ಹಾಜಿ , ಮುಹಮ್ಮದ್ ಅಶ್ರಫ್ ಬರಕ , ಮುಹಮ್ಮದ್ ಮನ್ಸೂರ್ ಅಝದ್ , ಎಸ್ . ಎಮ್ ಮುಸ್ತಫ , ಮುಹಮ್ಮದ್ ಹಾರಿಸ್ , ರಿಯಾಝ್ ಬಾವ ಪಾಲ್ಗೊಳ್ಳುವರು. ಎಂದು ಪ್ರ . ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News