ಸುಳ್ಯ| ಸೇತುವೆ ದುರಸ್ಥಿ: ವಾಹನ ಸಂಚಾರ ಬದಲಾವಣೆ

Update: 2024-08-27 14:02 GMT

ಸಾಂದರ್ಭಿಕ ಚಿತ್ರ

ಮಂಗಳೂರು: ಸುಳ್ಯ ತಾಲೂಕಿನ ಗುತ್ತಿಗಾರು-ಬಳ್ಳಕ್ಕ-ಪಂಜ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಜಳಕದ ಹೊಳೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಹಾಗಾಗಿ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಗುತ್ತಿಗಾರು-ಬಳ್ಳಕ್ಕ-ಪಂಜ ಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳು ಪರ್ಯಾಯ ಮಾರ್ಗವಾದ ಗುತ್ತಿಗಾರು - ಕಮಿಲ- ಬಳ್ಪ ಜಿಲ್ಲಾ ಮುಖ್ಯ ರಸ್ತೆಯಾಗಿ ಸಂಚರಿಸಬೇಕು.

*ಸುಳ್ಯ ತಾಲೂಕಿನ ಪುಳಿಕುಕ್ಕು, ಎಡಮಂಗಲ, ಅಲೆಕ್ಕಾಡಿ ಜಿಲ್ಲಾ ಮುಖ್ಯ ರಸ್ತೆಯ 6.50ಕಿ.ಮೀ.ಗಳಲ್ಲಿ ಮಾಲೆಂಗೇರಿ ಎಂಬಲ್ಲಿರುವ ಮೋರಿಯ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಎಡಮಂಗಲ-ಪುಳಿಕುಕ್ಕು, ಅಲೆಕಾರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾದ ಮಹಾಕಾಳಿ- ಮಾರ್ದುರಡ್ಕ-ಕಲ್ಲೆಂಬಿ-ಪೆಟ್ರೆ ಮಾರ್ಗವಾಗಿ ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ.

*ಸುಳ್ಯ ತಾಲೂಕಿನ ಗುತ್ತಿಗಾರು ಕಮಿಲ-ಬಳ್ಪಜಿಲ್ಲಾ ಮುಖ್ಯ ರಸ್ತೆಯ ಚತ್ರಪ್ಪಾಡಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ವನ್ನು ನಿರ್ಬಂಧಿಸಿ ಗುತ್ತಿಗಾರು-ಕಮಿಲ-ಬಳ್ಪಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳು ಪರ್ಯಾಯ ಮಾರ್ಗವಾದ ಜಬಳೆ - ಕುಕ್ಕುಜಡ್ಕ - ಪಾಜಪಳ್ಳ ಮಾರ್ಗವಾಗಿ ನಿಂತಿಕಲ್ಲು ಮೂಲಕ ಸಂಚರಿಸುವಂತೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News