ಸುರತ್ಕಲ್‌: ಜೆಸಿಬಿ ನುಗ್ಗಿಸಿ ಎಟಿಎಂ ದರೋಡೆಗೆ ಯತ್ನ ಪ್ರಕರಣ; ಆರೋಪಿಗಳ ಬಂಧನ

Surathkal: JCB attempts to rob ATM; Arrest of accused

Update: 2023-08-21 07:14 GMT

ಸುರತ್ಕಲ್: ಇಲ್ಲಿನ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣೀಜ್ಯ ಸಂಕೀರ್ಣದಲ್ಲಿದ್ದ ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ನಿವಾಸಿ ದೇವರಾಜ್ ಯಾನೆ ದೇವು ನಾಯ್ಕ (24), ದೊಡ್ಡತಾಂಡ ಸೇವಲಾಲ್ ದೇವಾಸ್ಥಾನದ ಬಳಿಯ ನಿವಾಸಿ ಭರತ್ ಜೆ.ಜಿ ( 20 ), ಮೊದಲಿನ ಕೆರೆ, ಸರಕಾರಿ ಶಾಲೆ ಬಳಿಯ ನಿವಾಸಿ ನಾಗರಾಜ ನಾಯ್ಕ ಯಾನೆ ನಾಗು (21) ಹಾಗೂ ಆರೋಪಿಗಳಿಗೆ‌ ಧನ ಸಹಾಯ ಮಾಡಿದ್ದ ಬೇಗೂರು ಗ್ರಾಮದ ದೊಡ್ಡತಾಂಡ ನಿವಾಸಿ ಧನ್ರಾಜ್ ನಾಯ್ಕ ಯಾನೆ ಧನು(22) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಹೀರೋ ಬೈಕ್, ಜೆಸಿಬಿ ಹಾಗೂ 2 ಆಂಡ್ರಾಯ್ಡ್ ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಪೊಲೀಸರು ನ್ಯಾಯಾಲಾಯಕ್ಕೆ ಹಾಜರು ಪಡಿಸಿದ್ದು, ಪ್ರಕರಣದಲ್ಲಿ ನೇರಭಾಗಿಗಳಾಗಿದ್ದ ಮೂರು ಮಂದಿಯನ್ನು ಮೂರು ದಿನಗಳ‌ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಹಣ ಸಹಾಯ ಮಾಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News