ತನಗೇ ತಾನೇ ಗುಂಡುಹಾರಿಸಿ ಅಗ್ನಿವೀರ ಆತ್ಮಹತ್ಯೆ

Update: 2023-10-14 17:41 GMT

Photo : indianexpress

ಹೊಸದಿಲ್ಲಿ : ಅಗ್ನಿವೀರ ನೇಮಕಾತಿಯಡಿ ಸೇನೆಗೆ ಹೊಸದಾಗಿ ಸೇರ್ಪಡೆಗೊಂಡಿದ್ದ ಯೋಧನೊಬ್ಬ ತನಗೆ ತಾನೇ ಗುಂಡುಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಶನಿವಾರ ವರದಿಯಾಗಿದೆ. ಮೃತ ಅಗ್ನಿವೀರ ಯೋಧನನ್ನು ಅಮೃತಪಾಲ್ ಸಿಂಗ್ (19) ಎಂದು ಗುರುತಿಸಲಾಗಿದೆ. ಬುಧವಾರ ಆತ ಕಾವಲಿನ ಕರ್ತವ್ಯದಲ್ಲಿದ್ದಾಗ ತನಗೆ ತಾನೇ ಗುಂಡುಹಾರಿಸಿಕೊಂಡು ಸಾವನ್ನಪ್ಪಿದ್ದಾನೆಂದು ಸೇನಾ ಹೇಳಿಕೆ ತಿಳಿಸಿದೆ.

ಘಟನೆಗೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ. ಮೃತದೇಹದ ಪಾರ್ಥಿವ ಶರೀರವನ್ನು ಬಂಧುಗಳಿಗೆ ಹಸ್ತಾಂತರಿಸಲಾಗಿದ್ದು, ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು. ಆದರೆ ಸ್ವಯಂ ಪ್ರೇರಿತವಾಗಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವುದರಿಂದ ಹಾಲಿ ನೀತಿ ನಿಯಮಾನುಸಾರ ಅಂತ್ಯ ಸಂಸ್ಕಾರವೇಳೆ ಸೇನಾ ಗೌರವನ್ನು ನೀಡಲಾಗಿಲ್ಲ’’ ಎಂದು ಹೇಳಿಕೆ ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News