ವಂಚನೆ ಪ್ರಕರಣ: ಕೇರಳ ಕಾಂಗ್ರೆಸ್‌ ಮುಖ್ಯಸ್ಥ ಸುಧಾಕರನ್‌ ಬಂಧನ

ಕೇರಳ ಪ್ರದೇಶ ಕಾಂಗ್ರೆಸ್‌ ಕಮಿಟಿ ಮುಖ್ಯಸ್ಥ ಕೆ. ಸುಧಾಕರನ್‌ ರನ್ನು ಶುಕ್ರವಾರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

Update: 2023-06-23 15:50 GMT
Editor : Muad | Byline : ವಾರ್ತಾಭಾರತಿ

ತಿರುವನಂತಪುರಂ: ಕೇರಳ ಪ್ರದೇಶ ಕಾಂಗ್ರೆಸ್‌ ಕಮಿಟಿ ಮುಖ್ಯಸ್ಥ ಕೆ. ಸುಧಾಕರನ್‌ ರನ್ನು ಶುಕ್ರವಾರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ನಕಲಿ ಪುರಾತನ ವಸ್ತುಗಳ ಮಾರಾಟಗಾರ ಮಾನ್ಸನ್ ಮಾವುಂಕಲ್ ಮೊದಲ ಆರೋಪಿಯಾಗಿರುವ ವಂಚನೆ ಪ್ರಕರಣದಲ್ಲಿ ಸುಧಾಕರನ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ಸತತ ಏಳು ಗಂಟೆಗಳ ಕಾಲ ಕ್ರೈಂಬ್ರಾಂಚ್‌ ಸುಧಾಕರನ್‌ರನ್ನು ವಿಚಾರಣೆ ನಡೆಸಿ ಬಳಿಕ ಬಂಧಿಸಲಾಗಿದೆ. ಇದೀಗ ಹೈಕೋರ್ಟ್‌ ಸೂಚನೆಯ ಮೂಲಕ ಅವರಿಗೆ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಜೂನ್ 23 ರಂದು ಕ್ರೈಂ ಬ್ರಾಂಚ್ ಮುಂದೆ ಹಾಜರಾಗುವಂತೆ ಸುಧಾಕರನ್‌ಗೆ ಬುಧವಾರ ಕೇರಳ ಹೈಕೋರ್ಟ್ ಹೇಳಿದ್ದು, ವಂಚನೆ ಪ್ರಕರಣದಲ್ಲಿ ಬಂಧಿತನಾದರೆ, ಇಬ್ಬರ ಶ್ಯೂರಿಟಿಯೊಂದಿಗೆ 50,000 ರೂ.ಗಳ ಬಾಂಡ್ ಅನ್ನು ಒದಗಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News