ಟಿಎಂಸಿಯ ಮಾಜಿ ನಾಯಕ ತಪಸ್ ರಾಯ್ ಬಿಜೆಪಿ ಸೇರ್ಪಡೆ

Update: 2024-03-06 16:18 GMT

ತಪಸ್ ರಾಯ್ | Photo: ANI  

ಹೊಸದಿಲ್ಲಿ : ಟಿಎಂಸಿ ಮಾಜಿ ನಾಯಕ ತಪಸ್ ರಾಯ್ ಗುರುವಾರ ಬಿಜೆಪಿಗೆ ಸೇರಿದ್ದಾರೆ.

ಪಶ್ಚಿಮಬಂಗಾಳದ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ವರಿಷ್ಠ ಸುಕಾಂತ್ ಮಜುಂದಾರ್ ಅವರ ಉಪಸ್ಥಿತಿಯಲ್ಲಿ ಕೋಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ತಪಸ್ ರಾಯ್ ಅವರು ಬಿಜೆಪಿ ಸೇರಿದರು.

‘‘ನಾನು ಇಂದು ಬಿಜೆಪಿ ಸೇರಿದೆ. ಟಿಎಂಸಿ ದುರಾಡಳಿತ ಹಾಗೂ ದೌರ್ಜನ್ಯದ ವಿರುದ್ಧ ಹೋರಾಡಲು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಸಂತನು ಸೇನ್, ‘‘ರಾಯ್ ಅವರು ಸ್ವ ಹಿತಾಸಕ್ತಿಗಾಗಿ ತನ್ನ ತತ್ವ, ಸಿದ್ಧಾಂತಗಳನ್ನು ಕಡೆಗಣಿಸಿದ್ದಾರೆ. ಸ್ವಹಿತಾಸಕ್ತಿಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ ತಪಸ್ ರಾಯ್ ಅವರಂತಹ ದೇಶದ್ರೋಹಿಗಳನ್ನು ಪಶ್ಚಿಮಬಂಗಾಳದ ಜನರು ಎಂದಿಗೂ ಕ್ಷಮಿಸಲಾರರು’’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News