ಕಾಂಗ್ರೆಸ್ ಸೇರಿದ ಹೈದರಾಬಾದ್ ಮೇಯರ್ ಗಡ್ವಾಲ್ ವಿಜಯಲಕ್ಷ್ಮಿ

Update: 2024-03-30 16:36 GMT

ಗಡ್ವಾಲ್ ವಿಜಯಲಕ್ಷ್ಮಿ | Photo: ANI 

ಹೈದರಾಬಾದ್ : ಇತ್ತೀಚಿಗಷ್ಟೇ ಬಿ ಆರ್ ಎಸ್ ಪಕ್ಷವನ್ನು ತೊರೆದಿದ್ದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ)ಯ ಮೇಯರ್ ಗಡ್ವಾಲ್ ವಿಜಯಲಕ್ಷ್ಮಿ ಅವರು ಶನಿವಾರ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.

ಅಧಿಕೃತ ಕಾರ್ಯಕ್ರಮವೊಂದರಲ್ಲಿ ಎಐಸಿಸಿ ತೆಲಂಗಾಣ ಉಸ್ತುವಾರಿ ದೀಪಾ ದಾಸಮುನ್ಶಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಗಡ್ವಾಲ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಅವರ ತಂದೆ ಹಾಗೂ ಹಿರಿಯ ಬಿ ಆರ್ ಎಸ್ ನಾಯಕ ಕೆ.ಕೇಶವರಾವ್ ಅವರು ಶೀಘ್ರವೇ ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ.

ಜಿಎಚ್ಎಂಸಿ ವ್ಯಾಪ್ತಿಯಲ್ಲಿ 24 ವಿಧಾನಸಭಾ ಕೇತ್ರಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಶೂನ್ಯಸಾಧನೆ ಮಾಡಿದ್ದ ಕಾಂಗ್ರೆಸ್ ಗೆ ಗಡ್ವಾಲ್ ಸೇರ್ಪಡೆ ಬಲವನ್ನು ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News