ಮಧ್ಯಪ್ರದೇಶ: ಬಿಜೆಪಿ ಸೇರಿದ 100ಕ್ಕೂ ಅಧಿಕ ಕಾಂಗ್ರೆಸ್‌ ನಾಯಕರು; ದ್ರೋಹಿಗಳು ಎಂದ ಕಾಂಗ್ರೆಸ್‌

Update: 2024-04-20 11:52 GMT

PC : X \ BJP4MP

ಭೋಪಾಲ್:‌ ಮಧ್ಯ ಪ್ರದೇಶದ ಶಿವಪುರ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ಹರಿವಲ್ಲಭ್‌ ಶುಕ್ಲಾ ಸಹಿತ ಸುಮಾರು 100ಕ್ಕೂ ಅಧಿಕ ಸ್ಥಳೀಯ ಕಾಂಗ್ರೆಸ್‌ ನಾಯಕರು ಇಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ರಾಜ್ಯದಲ್ಲಿ ಆರು ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಪಕ್ಷದಿಂದ ಹಲವರು ವಲಸೆ ಹೋದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಧ್ಯ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಜಿತು ಪಟ್ವಾರಿ ಅವರ ಮಾಧ್ಯಮ ಸಲಹೆಗಾರ ಕೆ ಕೆ ಮಿಶ್ರಾ, ಪಕ್ಷಾಂತರೊಂಡವರನ್ನು ದ್ರೋಹಿಗಳು ಎಂದು ಬಣ್ಣಿಸಿದ್ದಾರೆ. “ಬಿಜೆಪಿ ಸೇರಿದವರು ತಮ್ಮ ಮಾತೃ ಪಕ್ಷಕ್ಕೆ ದ್ರೋಹವೆಸಗಿದ್ದಾರೆ. ಅವರಿಗೆ ಪಕ್ಷದಿಂದ ಎಲ್ಲವೂ ದೊರಕಿದೆ ಆದರೆ ಪಕ್ಷಕ್ಕಾಗಿ ಕೊಡುಗೆ ನೀಡಬೇಕಾದ ಹಾಗೂ ವಿಭಜನಾತ್ಮಕ ಶಕ್ತಿಗಳ ವಿರುದ್ಧ ಹೋರಾಡಬೇಕದ ಸಂದರ್ಭದಲ್ಲಿ ಹಣ ಮತ್ತು ಸ್ನಾಯುಬಲದೆದುರು ಅವರು ತಲೆಬಾಗಿದ್ದಾರೆ.” ಎಂದು ಹೇಳಿದ್ದಾರೆ.

ಈ ದ್ರೋಹಿಗಳಿಗೆ ಇತಿಹಾಸ ಕ್ಷಮೆ ನೀಡದು, ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News