ಕೇದಾರನಾಥ ಧಾಮದ ಬಳಿಯ ಗಾಂಧಿ ಸರೋವರವನ್ನು ಅಪ್ಪಳಿಸಿದ ಭಾರಿ ಹಿಮಪಾತ

Update: 2024-06-30 21:58 IST
ಕೇದಾರನಾಥ ಧಾಮದ ಬಳಿಯ ಗಾಂಧಿ ಸರೋವರವನ್ನು ಅಪ್ಪಳಿಸಿದ ಭಾರಿ ಹಿಮಪಾತ

Photo Credit: PTI 

  • whatsapp icon

ರುದ್ರಪ್ರಯಾಗ್ : ಕೇದಾರನಾಥ ಧಾಮದಿಂದ ನಾಲ್ಕು ಕಿಮೀ ಮೇಲಿರುವ ಗಾಂಧಿ ಸರೋವರಕ್ಕೆ ಭಾರಿ ಹಿಮಪಾತ ಅಪ್ಪಳಿಸಿರುವ ಘಟನೆ ರವಿವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.

ಚೋರಬರಿ ಹಿಮಗಡ್ಡೆಯಲ್ಲಿ ಕಾಣಿಸಿಕೊಂಡ ಈ ಹಿಮಪಾತವು, ಅದೇ ಪ್ರದೇಶದಲ್ಲಿನ ಕಣಿವೆಗೆ ಉರುಳಿತಾದರೂ ಯಾವುದೇ ಜೀವ ಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಮುಂಜಾನೆ 5 ಗಂಟೆಯ ಸಮಯದಲ್ಲಿ ಸಂಭವಿಸಿದ ಈ ನೈಸರ್ಗಿಕ ವಿದ್ಯಮಾನವನ್ನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದ ಭಕ್ತಾದಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದಾರೆ.

ಭಾರಿ ಪ್ರಮಾಣದ ಹಿಮಗಡ್ಡೆಗಳು ಕೆಳಗೆ ಉರುಳಿ, ಕಂದಕವೊಂದಕ್ಕೆ ಬಿದ್ದ ನಂತರ ನಿಂತಿರುವುದು ಕಂಡು ಬಂದಿದೆ. ಕೇದಾರನಾಥ ಕಣಿವೆಯ ಮೇಲ್ಭಾಗದಲ್ಲಿರುವ ಹಿಮಚ್ಛಾದಿತ ಮೇರು-ಸುಮೇರು ಪರ್ವತ ವಲಯದ ಕೆಳಗಿರುವ ಚೋರಬರಿ ಹಿಮಗಡ್ಡೆಯಲ್ಲಿರುವ ಗಾಂಧಿ ಸರೋವರದ ಮೇಲ್ಭಾಗದಲ್ಲಿ ಈ ಹಿಮಪಾತ ಸಂಭವಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News