ಶ್ರೀನಗರ: ಭಯೋತ್ಪಾದಕರ ಗುಂಡಿನಿಂದ ಪೋಲಿಸ್ ಅಧಿಕಾರಿಗೆ ಗಾಯ

Update: 2023-10-29 17:27 GMT

ಸಾಂದರ್ಭಿಕ ಚಿತ್ರ Photo- PTI

ಶ್ರೀನಗರ: ರವಿವಾರ ಇಲ್ಲಿ ಭಯೋತ್ಪಾದಕರ ಗುಂಡೇಟಿನಿಂದ ಪೋಲಿಸ್ ಅಧಿಕಾರಿಯೋರ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇನ್ಸ್‌ಪೆಕ್ಟರ್ ಮಸ್ರೂರ್ ವಾನಿ ಈದ್ಗಾ ಮೈದಾನದಲ್ಲಿ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಗೆ ಪಿಸ್ತೂಲು ಬಳಸಿದ್ದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರದೇಶವನ್ನು ನಿರ್ಬಂಧಿಸಲಾಗಿದೆ ಎಂದು ಕಾಶ್ಮೀರ ವಲಯ ಪೋಲಿಸರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ವಿದೇಶಿ ಭಯೋತ್ಪಾದಕರ ಪಾತ್ರ ಹೆಚ್ಚುತ್ತಿದ್ದು, ಅಧಿಕೃತ ಅಂಕಿಅಂಶಗಳಂತೆ ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ಹತ್ಯೆಯಾಗಿರುವ 46 ಭಯೋತ್ಪಾದಕರಲ್ಲಿ 37 ಜನರು ಪಾಕಿಸ್ತಾನ ಮೂಲದವರಾಗಿದ್ದರು. ಕೇವಲ ಒಂಭತ್ತು ಜನರು ಮಾತ್ರ ಸ್ಥಳೀಯ ನಿವಾಸಿಗಳಾಗಿದ್ದರು. ಜಮ್ಮು-ಕಾಶ್ಮೀರದ 33 ವರ್ಷಗಳ ಭಯೋತ್ಪಾದನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊಲ್ಲಲ್ಪಟ್ಟಿರುವ ವಿದೇಶಿ ಭಯೋತ್ಪಾದಕರ ಸಂಖ್ಯೆ ಸ್ಥಳೀಯರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News