ಆತ್ಮಹತ್ಯೆಗೆ ಯತ್ನಿಸಿದ್ದ ರೈತನನ್ನು 2 ಕಿ.ಮೀ. ಭುಜದ ಮೇಲೆ ಹೊತ್ತು ಪ್ರಾಣ ಉಳಿಸಿದ ಪೊಲೀಸ್ ಕಾನ್ ಸ್ಟೇಬಲ್

Update: 2024-02-29 14:24 GMT

Photo:malayalam.indiatoday.in

ತೆಲಂಗಾಣ : ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು 2 ಕಿ.ಮೀ ಭುಜದ ಮೇಲೆ ಹೊತ್ತು ಪ್ರಾಣ ಉಳಿಸಿದ ಘಟನೆಯು ತೆಲಂಗಾಣ ಕರೀಮ್ ನಗರದ ವೀನಾವನಕ ಮಂಡಲ್ ನ ಬೇತಿಗಲ್ ಗ್ರಾಮದಲ್ಲಿ ವರದಿಯಾಗಿದೆ.

ಮನೆಯಲ್ಲಿ ಉಂಟಾದ ಜಗಳದಿಂದಾಗಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ತಮ್ಮ ಜಮೀನಿನಲ್ಲಿ ಕೀಟನಾಶಕ ಸೇವಿಸಿದ್ದರು. ಪ್ರಾಣಾಪಾಯದಲ್ಲಿ ಹೊರಳಾಡುತ್ತಿದ್ದುದ್ದನ್ನು ರೈತನನ್ನು ಗಮನಿಸಿದ ಹತ್ತಿರದಲ್ಲಿದ್ದ ರೈತರು ತಕ್ಷಣ ಆರೋಗ್ಯ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕಾಗಮಿಸಿದ ಕಾನ್ ಸ್ಟೇಬಲ್ ಜಯ್ಪಾಲ್ ಅವರು ಹೊಲದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ರೈತನನ್ನು ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಭುಜದ ಮೇಲೆ ರೈಹೊತ್ತುಕೊಂಡು ಹೊಲಗಳ ಕಾಲುದಾರಿಗಳ ನಡುವೆ ಎರಡು ಕಿ.ಮೀ ಸಾಗಿ ಜಮ್ಮಿಕುಂಟ ಆಸ್ಪತ್ರೆಗೆ ದಾಖಲಿಸಿದರು. ಸರಿಯಾದ ಸಮಯಕ್ಕೆ ರೈತನನ್ನು ಆಸ್ಪತ್ರೆಗೆ ದಾಖಲಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ತುರ್ತು ಸಮಯದಲ್ಲಿ ರೈತನ ಪ್ರಾಣ ಉಳಿಸಿದ್ದಕ್ಕೆ ಜಯಪಾಲ್ ಅವರನ್ನು ಸ್ಥಳೀಯ ಜನಪ್ರತಿನಿಧಿಗಳು. ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News