ರಾಹುಲ್ ಗಾಂಧಿ ಆಪ್ತ ಸಹಾಯಕ ಸೋಗಿನಲ್ಲಿ ಯು.ಟಿ. ಖಾದರ್‌ ರನ್ನು ವಂಚಿಸಲು ಯತ್ನ: ಪ್ರಕರಣ ದಾಖಲು

Update: 2023-01-02 15:45 GMT

ಮಂಗಳೂರು: ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ (U. T. Khader) ಅವರಿಗೆ ಅಪರಿಚಿತನೊಬ್ಬ ಫೋನ್ ಕರೆ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಆಪ್ತ ಸಹಾಯಕ (ಪಿಎ) ಎಂದು ಹೇಳಿ ವಂಚಿಸಲು ಯತ್ನಿಸಿದ ಘಟನೆ ವರದಿಯಾಗಿದೆ.

ಯು.ಟಿ. ಖಾದರ್‌ ಅವರು ಈ ವಿಷಯ ಅರಿವಾಗುತ್ತಲೇ ಮಂಗಳೂರು ಪೊಲೀಸ್ ಕಮಿಶನರ್ ಎನ್. ಶಶಿಕುಮಾರ್‌ ರಿಗೆ ದೂರು ನೀಡಿದ್ದು, ಖಾದರ್ ಅವರಿಗೆ ವಂಚಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ ಮಧ್ಯಾಹ್ನ ಯು.ಟಿ.ಖಾದರ್ ಅವರ ಮೊಬೈಲ್ ಗೆ 8146006626 ನಂಬರ್‌ನಿಂದ ಕರೆ ಬಂದಿತ್ತು. ಸಭೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ತಕ್ಷಣ ಅವರಿಗೆ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಎರಡು ಬಾರಿ ಪೋನ್ ಕರೆ ಬಂದಿತ್ತು. ಸಭೆ ಮುಗಿಸಿ ಮೊಬೈಲ್‌ನ್ನು ಪರಿಶೀಲಿಸಿದಾಗ  'Good afternoon this side Kaniskha Singh pa to sri rahul Gandhi ji call me' ಎಂದು ಬರೆಯಲಾಗಿತ್ತು. ಈ ಮೊಬೈಲ್ ಸಂಖ್ಯೆಯನ್ನು ಎಐಸಿಸಿ ಕಾರ್ಯದರ್ಶಿ .ಕೆ.ಸಿ. ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಿರುವುದು ಟ್ರೂ ಕಾಲರ್ ಮೂಲಕ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಬಿಜೆಪಿ ಕಾರ್ಯಕರ್ತ: ಶಾಸಕ ಅರವಿಂದ ಲಿಂಬಾವಳಿ

Similar News