ಬೆಂಗಳೂರು | ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್‍ಗಳು ಪತ್ತೆ

Update: 2024-07-04 17:00 GMT

ಬೆಂಗಳೂರು : ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಗುದದ್ವಾರದಲ್ಲಿ 2 ಮೊಬೈಲ್‍ಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ನ್ಯಾಯಾಲಯದಿಂದ ವಾಪಸ್ ಜೈಲಿಗೆ ಕರೆತರುವಾಗ ವಿಚಾರಣಾಧೀನ ಕೈದಿಯಾಗಿರುವ ರಘುವೀರ್ ಎಂಬಾತ ಬೇರೆಯವರಿಂದ ಮೊಬೈಲ್ ಪಡೆದುಕೊಂಡು ಗುದದ್ವಾರದಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.

ಕಾನ್‍ಸ್ಟೇಬಲ್ ಶ್ರೀಕೃಷ್ಣ ಎಂಬುವರು ಪ್ರಕರಣವೊಂದರ ಆರೋಪಿ ರಘುವೀರ್ ನನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ರಘುವೀರ್ ಬೇರೆಯವರಿಂದ ಮೊಬೈಲ್ ಪಡೆದುಕೊಂಡಿದ್ದಾನೆ. ಆದರೆ, ಜೈಲಿಗೆ ಹೋದಾಗ ತಪಾಸಣೆ ವೇಳೆ ಸ್ಕ್ಯಾನ್ ಸೈರನ್ ಹೊಡೆದುಕೊಂಡಿದೆ. ಕೂಡಲೇ ರಘುವೀರ್ ನನ್ನು ಆಸ್ಪತ್ರೆಗೆ ಕರೆದೊಯ್ದು ಎಕ್ಸ್‌ ರೇ ಮಾಡಿಸಿದಾಗ ಆತನ ಗುದದ್ವಾರದಲ್ಲಿ 2 ಮೊಬೈಲ್‍ ಫೋನ್, ಬ್ಯಾಟರಿ ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News