ಬೆಂಗಳೂರು | ಕ್ವಾರಿಯ ನೀರಿನಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತ್ಯು, ಓರ್ವನ ರಕ್ಷಣೆ

Update: 2024-06-15 13:55 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಇಲ್ಲಿನ ದೇವನಹಳ್ಳಿ ಸಮೀಪದ ಬೆಟ್ಟಹಲಸೂರು ಕ್ವಾರಿಯ ನೀರಿನಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಬೆಂಗಳೂರು ಮೂಲದ ಮೊಹಮ್ಮದ್(18) ಉಹೇಸ್‍ ಖಾನ್(18) ಮೃತ ಯುವಕರು ಎಂದು ಗುರುತಿಸಲಾಗಿದೆ.

ಜೂ.14ರಂದು ಆರು ಜನ ಸ್ನೇಹಿತರು ಲಾಂಗ್ ಡ್ರೈವ್ ಟ್ರಿಪ್ ಎಂದು ಬೆಟ್ಟಹಲಸೂರಿಗೆ ಹೋಗಿದ್ದರು. ಈ ವೇಳೆ ಮೂವರು ನೀರಿನಲ್ಲಿ ಈಜಲು ತೆರಳಿದ್ದರು. ಕ್ವಾರಿಯ ನೀರಿನಲ್ಲಿ ಈಜಲಾಗದೆ ಮೂವರು ಮುಳುಗುವಾಗ ಅದನ್ನು ಕಂಡ ಇತರೆ ಸ್ನೇಹಿತರು, ಮೂವರಲ್ಲಿ ಒರ್ವನನ್ನು ರಕ್ಷಿಸಿದ್ದಾರೆ. ಮತ್ತಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸಂಜೆ ಓರ್ವನ ಮೃತದೇಹ ಹೊರ ತೆಗೆದಿದ್ದು, ಜೂ.15ರ ಶನಿವಾರ ಮತ್ತೊಬ್ಬನ ಮೃತ ದೇಹ ಸಿಕ್ಕಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News