ಕಿನ್ಯ: ಆಲಿಕುಂಞಿ ಹಾಜಿ ಪಾರೆ ಗೆ ಗೌರವಾರ್ಪಣೆ
ದೇರಳಕಟ್ಟೆ: ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಲಿಕುಂಞಿ ಹಾಜಿ ಪಾರೆಯವರಿಗೆ ಕಿನ್ಯ ಪ್ರದೇಶದ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ ಕಾರ್ಯಕ್ರಮ ಗುರುವಾರ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಸುನ್ನೀ ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ವಿ.ಎ.ಮುಹಮ್ಮದ್ ಮುಸ್ಲಿಯಾರ್ ಕೂಡಾರ ಅಧ್ಯಕ್ಷತೆ ವಹಿಸಿದ್ದರು. ಎಸ್ವೈಎಸ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಅಗಲಿದ ನಾಯಕ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ರವರ ಅನುಸ್ಮರಣೆ ಮಜ್ಲಿಸ್ ನಲ್ಲಿ ಸೈಯದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಕರ್ನಾಟಕ ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ. ಇಸ್ಮಾಯೀಲ್ ಹಾಜಿ ಪರಮಾಂಡ, ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯೀಲ್ ಹಾಜಿ ಸಾಗ್, ಪತ್ರಕರ್ತ ಬಶೀರ್ ಅಹ್ಮದ್ ಕಿನ್ಯ, ಎಸ್ವೈಎಸ್ ಕಿನ್ಯ ಸರ್ಕಲ್ ಉಪಾಧ್ಯಕ್ಷ ಪಿ.ಎಂ.ಉಸ್ಮಾನ್ ಝುಹ್ರಿ ಕುರಿಯ ಮಾತನಾಡಿದರು.
ಸಮಾರಂಭದಲ್ಲಿ ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ನಾಯಕ ಅಬ್ಬಾಸ್ ಖುತುಬಿನಗರ, ಕೆ.ಎಚ್. ಮೂಸಕುಂಞಿ ಬದ್ರಿಯಾ ನಗರ, ಹಸನ್ ಉಕ್ಕುಡ, ಅಲಿಕುಂಞಿ ಮೀಂಪ್ರಿ, ಮಹ್ಮೂದ್ ಉಳ್ಳಾಲ, ಅಲಿಕುಂಞಿ ಬಾಕಿಮಾರ್, ಎಸ್ವೈಎಸ್ ಕಿನ್ಯ ಸರ್ಕಲ್ ಇಸಾಬ ಕಾರ್ಯದರ್ಶಿ ಬಶೀರ್ ಲತೀಫಿ ಕುರಿಯ, ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಖುತುಬಿನಗರ,ಉಮರ್ ಝುಹ್ರಿ ಬದ್ರಿಯಾ ನಗರ, ಕೆಸಿಎಫ್ ಕಾರ್ಯಕರ್ತ ಇಬ್ರಾಹೀಂ ಖಲೀಲ್, ಎಸ್ಸೆಸ್ಸೆಫ್ ನಾಯಕ ಹಸೈನಾರ್ ಮೀಂಪ್ರಿ ಮುಂತಾದವರು ಉಪಸ್ಥಿತರಿದ್ದರು.
ಸುನ್ನೀ ಕೋ ಆರ್ಡಿನೇಶನ್ ಸಮಿತಿ ಕೋಶಾಧಿಕಾರಿ ನೌಫಲ್ ಅಹ್ಸನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮೀಂಪ್ರಿ ವಂದಿಸಿದರು.