ಸಿದ್ದರಾಮಯ್ಯ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದ್ದರೆ ತಕ್ಷಣ ರಾಜೀನಾಮೆ ನೀಡಲಿ: ವಿ.ಸೋಮಣ್ಣ

Update: 2024-10-03 06:49 GMT

ಹುಬ್ಬಳ್ಳಿ: ಒಂದು ತಪ್ಪು ಮಾಡಲು ಹೋಗಿ ಸಿದ್ದರಾಮಯ್ಯ 50 ತಪ್ಪು ಮಾಡಿದ್ದಾರೆ. ರಾಜೀನಾಮೆ ಕೊಡೋದು ಬಿಟ್ಟು ಸಿದ್ದರಾಮಯ್ಯ ಕಾಗಮ್ಮ, ಗುಬ್ಬಮ್ಮ ಕಥೆ ಹೇಳೋದನ್ನ ಬಿಡಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕಾಲು, ಕೈ, ಬಾಯಿ ಗಾಯ ಮಾಡಿಕೊಂಡಿದ್ದಾರೆ. ಹಾಗಾಗಿ ಅವರ ಮುಂದಿರೋದು ರಾಜೀನಾಮೆಯೊಂದೇ ದಾರಿ. ಈಗ ಏನೂ ಉಳಿದಿಲ್ಲ. ಸಿದ್ದರಾಮಯ್ಯ ಒಬ್ಬ ಮಾದರಿ ರಾಜಕಾರಣಿ. ಆದರೆ ತಪ್ಪು ಆಗಿ ಹೋಗಿದೆ. ಅದನ್ನು ಅವರು ಒಪ್ಪಿಕೊಂಡಿದ್ದಾರೆ. ವಿಧಾನ ಸಭೆ ಅಧಿವೇಷನ ನಡೆದಾಗಲೇ ಸೈಟ್ ವಾಪಸ್ ಕೊಟ್ಟಿದ್ದರೆ ಎಲ್ಲವೂ ಮುಗಿಯುತ್ತಿತ್ತು ಎಂದರು.

ಸಿದ್ದರಾಮಯ್ಯ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದ್ದರೆ, ಅವರ ಇತಿಹಾಸವನ್ನು ಮುಂದಿನ ಪೀಳಿಗೆ ತಿಳಿದುಕೊಳ್ಳಬೇಕಿದ್ದರೆ ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತನಿಖೆ ನಂತರ ಆರೋಪ ಮುಕ್ತವಾದರೆ ಮತ್ತೆ ಬೇಕಿದ್ದರೆ ಸಿಎಂ ಆಗಲಿ.  ಪಕ್ಷ ಅವರ ಮೇಲೆ ಗೌರವ ಇಟ್ಟಿದ್ದರೆ ಮತ್ತೆ ಸಿಎಂ ಮಾಡಲಿ ಆಗ ನಾವೇ ಅಭಿನಂದನೆ ತಿಳಿಸುತ್ತೇವೆ ಎಂದರು.




Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News