ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ: ಸೋಲಿನ ಭೀತಿಯಿಂದ ಮನೆಗೆ ಮರಳಿದ ಬಿಜೆಪಿ ಅಭ್ಯರ್ಥಿ

Update: 2024-06-07 06:51 GMT

 ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್

ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಬಿ ಪಾಟೀಲ್ ಬಹುತೇಕ ಗೆಲವು ಖಚಿತವಾಗಿದ್ದು, ಅಧಿಕೃತ ಘೋಷಣೆ ಕೆಲವೇ ಕ್ಷಣಗಳು ಬಾಕಿಯುಳಿದಿವೆ.

ಈ ಮಧ್ಯೆ ಸೋಲಿನ ಭೀತಿಯಿಂದ  ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಅವರು ಮತ ಎಣಿಕೆ ಕೇಂದ್ರದಿಂದ ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಪ್ರಾಶಸ್ತ್ಯ ದ ಮತಗಳ 8ನೇ ( ಅಂತಿಮ ) ಸುತ್ತಿನ ಮತ ಎಣಿಕೆ ಈಗಾಗಲೇ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಅವರು 39,496 ಮತಗಳು ಪಡೆದಿದ್ದು, 4,446 ಮತಗಳ ಮುನ್ನೆಡೆ ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News