ಸಿಎಂ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದ ಆರ್.ಟಿ.ಐ. ಕಾರ್ಯಕರ್ತನಿಗೆ ಜೀವ ಬೆದರಿಕೆ: ಗನ್ ಮ್ಯಾನ್ ನೀಡುವಂತೆ ಮನವಿ

Update: 2024-09-02 06:02 GMT

ಮೈಸೂರು, ಸೆ.2: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಾಗಿರುವ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದ ಆರ್.ಟಿ.ಐ. ಕಾರ್ಯಕರ್ತ ಗಂಗರಾಜು ಅವರಿಗೆ ಜೀವ ಬೆದರಿಕೆ ಇದ್ದು, ಓರ್ವ ಗನ್ ಮ್ಯಾನ್ ನಿಯೋಜಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯ ಅವರ ಮೇಲೆ ಆರೋಪ ಹೊರಿಸಿದ ಮೇಲೆ ನನಗೆ ಜೀವ ಬೆದರಿಕೆ ಬರುತ್ತಿದ್ದು ಗನ್ ಮ್ಯಾನ್ ಒದಗಿಸಬೇಕು ಎಂದು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ನಿಮಗೆ ಗನ್ ಮ್ಯಾನ್ ಒದಗಿಸಲು ಸಾಧ್ಯವಿಲ್ಲ, ನಿಮ್ಮ ಮನೆಯ ಬಳಿ ಪೊಲೀಸ್ ಬೀಟ್ ಹೆಚ್ಚಳ ಮಾಡಲಾಗಿದೆ. ನಿಮ್ಮ ಮನೆಯ ಬಳಿ ಬೀಟ್ ಪುಸ್ತಕವನ್ನು ಇಡಲಾಗಿದ್ದು, ಪೊಲೀಸರು ಆಗಾಗ ಗಸ್ತು ತಿರುಗುತ್ತಿರುತ್ತಾರೆ. ಒಂದು ವೇಳೆ ನಿಮಗೆ ಗನ್ ಮ್ಯಾನ್ ಬೇಕು ಎಂದಾದರೆ ಸರಕಾರಕ್ಕೆ ನಿಯಮಾನುಸಾರ ಹಣ ಪಾವತಿಸಿ ಗನ್ ಮ್ಯಾನ್ ಪಡೆಯುವಂತೆ ಹಿಂಬರಹವನ್ನು ಪೊಲೀಸರು ನೀಡಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News