ರಾಜು. ಎಸ್ ಅವರಿಗೆ ಮೈಸೂರು ವಿವಿಯಿಂದ ಪಿಎಚ್.ಡಿ

Update: 2024-02-28 06:00 GMT

ಮೈಸೂರು:  OPENTEXT ಕಂಪನಿಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕಪುರಂ ನಿವಾಸಿ ರಾಜು. ಎಸ್ ಅವರು ಗಣಿತಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ' ಎ ಸ್ಟಡಿ ಆನ್ ಡಾಮಿನೇಷನ್ ಆಂಡ್ ಎನರ್ಜಿ ಕಾನ್ಸೆಪ್ಟ್ಸ್ ಇನ್ ಗ್ರಾಫ್ಸ್ ' ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.

ರಾಜು. ಎಸ್ ಅವರು ಅಶೋಕಪುರಂ ನ ದಿವಂಗತ. ಕೆ. ಸಿದ್ದರಾಜು ಹಾಗು ಜಯಮ್ಮ ದಂಪತಿಯ ಪುತ್ರ.  ಇವರಿಗೆ ಮಂಡ್ಯ PES ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ತ್ರದ ಮುಖ್ಯಸ್ಥರಾದ ಪ್ರೊ. ಡಾ. ಪುಟ್ಟಸ್ವಾಮಿ ರವರು ಮಾರ್ಗದರ್ಶನ ನೀಡಿದ್ದಾರೆ.

 ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಂಸಿಎ ಹಾಗು ಮೈಸೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

ರಾಜು ಅವರ ಈ ಸಾಧನೆಗೆ ಅಶೋಕಪುರಂ ನ ಅನೇಕ ಸಂಘ ಸಂಸ್ಥೆಗಳು ಹಾಗು ಸ್ಥಳೀಯ ನಿವಾಸಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News