ತಲೆಮರೆಸಿಕೊಂಡ ಭೋಲೆಬಾಬಾ | ಸ್ವಯಂಘೋಷಿತ ದೇವಮಾನವನ ನಿವಾಸದ ಮೇಲೆ ಪೊಲೀಸರ ದಾಳಿ

Update: 2024-07-03 16:07 GMT

Photo: X

ಲಕ್ನೋ : ತಲೆಮರೆಸಿಕೊಂಡಿರುವ ಭೋಲೆ ಬಾಬಾನಿಗಾಗಿ ಹಾಥ್ರಸ್ ಜಿಲ್ಲಾ ಪೊಲೀಸರು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ರಾಜ್ಯ ಸರಕಾರವು ಪಶ್ಚಿಮ ಹಾಗೂ ಕೇಂದ್ರ ಉತ್ತರಪ್ರದೇಶದ 34 ಜಿಲ್ಲೆಗಳನ್ನು ಕಟ್ಟೆಚ್ಚರದಲ್ಲಿರಿಸಿದೆ. ಮಂಗಳವಾರ ರಾತ್ರಿ ಮೈನ್ಪುರಿಯಲ್ಲಿರುವ ಭೋಲೆಬಾಬಾನ ಆಶ್ರಮ ರಾಮಕುಟೀರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಆದರೆ ಅಲ್ಲಿ ಭೋಲೆಬಾಬಾ ಪತ್ತೆಯಾಗಿಲ್ಲವೆಂ ಉಪ ಪೊಲೀಸ್ ಅಧೀಕ್ಷಕ ಎಸ್ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ. ಭೋಲೆಬಾಬಾ ವಿರುದ್ಧ ದೋಷಾರೋಪ ದಾಖಲಿಸಲಾಗುವುದೇ ಎಂಬ ಬಗ್ಗೆ ಈವರೆಗೆ ಯಾವುದೇ ವಿವರಗಳನ್ನು ಪೊಲೀಸರು ಈವರೆಗೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News