ಹರ್ಯಾಣ : ಕಾಂಗ್ರೆಸ್ ನಾಯಕನ ಸಹೋದರನ ಗುಂಡಿಕ್ಕಿ ಹತ್ಯೆ

Update: 2024-07-03 16:50 GMT

PC : NDTV 

ಫರೀದಾಬಾದ್: ಸ್ಥಳೀಯ ಕಾಂಗ್ರೆಸ್ ನಾಯಕನ ಸಹೋದರನನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನವಾಡ ಕೋಹ್ ಗ್ರಾಮದ ನಿವಾಸಿ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕ ಜ್ಯೋತೇಂದ್ರ ಭದನಾ ಅವರ ಸಹೋದರ ಕುನಾಲ್ ಭದನಾ (32) ಅವರನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಕ್ರೈಮ್‌ನ ಎಸಿಪಿ ಅಮನ್ ಯಾದವ್ ತಿಳಿಸಿದ್ದಾರೆ.

ಜ್ಯೋತೇಂದ್ರ ಭದಾನ ನೀಡಿದ ದೂರಿನ ಆಧಾರದಲ್ಲಿ ದಬುವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಹತ್ಯೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಂಧಿತರನ್ನು ಕೋಟ್ ಗ್ರಾಮದ ನಿವಾಸಿಗಳಾದ ವಿಜಯ್ ಸಿಂಗ್ (48), ವಿರೇಂದ್ರ ಆಲಿಯಾಸ್ ಬಿಲ್ಲು (40), ಫರೀದಾಬಾದ್‌ನ ಎಸ್‌ಜಿಎಂ ನಗರ್‌ನ ನಿವಾಸಿಗಳಾದ ರಮೇಶ್ (42), ಪ್ರದೀಪ್ ಆಲಿಯಾಸ್ ಕಲು (34) ಹಾಗೂ ಸಂದೀಪ್ ಆಲಿಯಾಸ್ ಸ್ಯಾಂಡಿ ಎಂದು ಗುರುತಿಸಲಾಗಿದೆ ಎಂದು ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News