ಮುಂಬೈ: ಕೈಗವಸು ಫ್ಯಾಕ್ಟರಿಯಲ್ಲಿ ಬೆಂಕಿ ಆಕಸ್ಮಿಕ: 6 ಮಂದಿ ಸಜೀವ ದಹನ

Update: 2023-12-31 03:04 GMT

Photo: ANI

ಮುಂಬೈ: ಕೈಗವಸು ಉತ್ಪಾದನಾ ಕಂಪನಿಯಲ್ಲಿ ನಡೆದ ಭೀಕರ ಬೆಂಕಿ ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಭಾನುವಾರ ತಡರಾತ್ರಿ 2.15ರ ಸುಮಾರಿಗೆ ನಡೆದಿದೆ.

 ವಲೂಜ್ ಎಂಐಡಿಸಿ ಪ್ರದೇಶದಲ್ಲಿ  ಕಾರ್ಯನಿರ್ವಹಿಸುತ್ತಿರುವ ಈ ಫ್ಯಾಕ್ಟರಿಯಾದ್ಯಂತ ಬೆಂಕಿ ವ್ಯಾಪಿಸಿತ್ತು. ಆರು ಮಂದಿ ಫ್ಯಾಕ್ಟರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ನಮ್ಮ ಅಧಿಕಾರಿಗಳು ಕಟ್ಟಡವನ್ನು ಪ್ರವೇಶಿಸಿ ಶೋಧ ಕಾರ್ಯ ನಡೆಸಿದಾಗ ಆರು ಮೃತದೇಹಗಳು ಪತ್ತೆಯಾಗಿವೆ" ಎಂದು ಅಗ್ನಿಶಾಮಕ ದಳದ ಅಧಿಕಾರಿ ಮೋಹನ್ ಮುಂಗ್ಸೆ ಹೇಳಿದ್ದಾರೆ.

"ಕಟ್ಟಡದಲ್ಲಿ 10-15 ಮಂದಿ ಕಾರ್ಮಿಕರು ನಿದ್ರಿಸುತ್ತಿದ್ದರು. ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು" ಎಂದು ಕಾರ್ಮಿಕರೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News