ಕೇರಳದಲ್ಲಿ ನೆಲೆಯೂರಲು ಹೊರಟ ಬಿಜೆಪಿ : ಅನಿಲ್ ಆಂಟನಿ, ರಾಜೀವ್ ಚಂದ್ರಶೇಖರ್ ಲೋಕಸಭಾ ಕಣಕ್ಕೆ

Update: 2024-03-02 15:51 GMT

ರಾಜೀವ್ ಚಂದ್ರಶೇಖರ್, ಅನಿಲ್ ಆಂಟನಿ | Photo: ANI 

ಹೊಸದಿಲ್ಲಿ: ಪ್ರಸಕ್ತ ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಪ್ರಾತಿನಿಧ್ಯದ ಕೊರತೆಯಿರುವ ಕೇರಳದಲ್ಲಿ, ಗಣನೀಯ ನೆಲೆಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಪಕ್ಷವು ಮುಂಬರುವ ಚುನಾವಣೆಗೆ ಅನಿಲ್ ಆಂಟನಿ ಮತ್ತು ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ.

ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ಪತ್ತನಂತಿಟ್ಟದಿಂದ ಸ್ಪರ್ಧಿಸಲಿದ್ದು, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂನಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಖಾತೆಯನ್ನು ಹೊಂದಿದ್ದಾರೆ. ತಾಂತ್ರಿಕ ಹಿನ್ನೆಲೆ ಮತ್ತು ಉದ್ಯಮಶೀಲತೆಯ ಪ್ರಯತ್ನಗಳಿಗೆ ಹೆಸರುವಾಸಿಯಾಗಿರುವ ರಾಜೀವ್ ಚಂದ್ರಶೇಖರ್ ಅವರು ದೂರಸಂಪರ್ಕ ಕ್ಷೇತ್ರಗದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ತ್ರಿಶೂರ್ನಿಂದ ಸುರೇಶ್ ಗೋಪಿ, ಅಟ್ಟಿಂಗಲ್ನಿಂದ ಮುರಳೀಧರನ್ ಮತ್ತು ಆಲಪ್ಪುಳದಿಂದ ಶೋಭಾ ಸುರೇಂದ್ರ ಸೇರಿದಂತೆ ಪ್ರಬಲ ಸ್ಪರ್ಧಿಗಳನ್ನು ಕಣಕ್ಕಿಳಿಸುವ ಮೂಲಕ ಕೇರಳದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂನ ಹಾಲಿ ಸಂಸದ ಕಾಂಗ್ರೆಸ್ನ ಶಶಿ ತರೂರ್ ಅವರನ್ನು ಎದುರಿಸುವ ನಿರೀಕ್ಷೆಯಿದೆ.

2023 ರಲ್ಲಿ ಬಿಜೆಪಿ ಸೇರಿದ ಅನಿಲ್ ಆಂಟನಿ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದ ಕೇರಳ ಡಿಜಿಟಲ್ ಮೀಡಿಯಾ ಸೆಲ್ನ ಮುಖ್ಯಸ್ಥರಾಗಿದ್ದರು. ಬಿಜೆಪಿಯಲ್ಲಿ ಅನಿಲ್ ಆಂಟನಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇರಳದ ಅಭ್ಯರ್ಥಿಗಳ ಪಟ್ಟಿ :

ಕಾಸರಗೋಡು – ಎಂ ಎಲ್ ಅಶ್ವಿನಿ

ಕಣ್ಣೂರು – ಸಿ ರಘುನಾಥ್

ವಡಗರ – ಪ್ರಫುಲ್ಲ ಕೃಷ್ಣ

ಕೋಝಿಕ್ಕೋಡ್ – ಎಂ ಟಿ ರಮೇಶ್

ಮಲಪ್ಪುರಂ – ಡಾ ಅಬ್ದುಲ್ ಸಮದ್

ಪೊನ್ನಾನಿ – ನಿವೇದಿತ ಸುಬ್ರಮಣ್ಯನ್

ಪಾಲಕ್ಕಾಡ್ – ಸಿ ಕೃಷ್ಣಕುಮಾರ್

ತ್ರಿಶೂರ್ – ಸುರೇಶ್ ಗೋಪಿ

ಅಲಪ್ಪುಳ – ಶೋಭಾ ಸುರೇಂದ್ರನ್

ಪಟ್ಟಣಂತಿಟ್ಟ – ಅನಿಲ್ ಕೆ ಆಂಟನಿ

ಅಟ್ಟಿಂಗಲ್ – ವಿ ಮುರಳೀಧರನ್

ತಿರುವನಂತಪುರ – ರಾಜೀವ್ ಚಂದ್ರಶೇಖರ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News