ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಪ್ರಧಾನಿ ಮೋದಿ

Update: 2024-03-01 12:15 GMT

ಪ್ರಧಾನಿ ನರೇಂದ್ರ ಮೋದಿ (File Photo: PTI)

ಜಾರ್ಖಂಡ್‌ : ಇಲ್ಲಿನ ಜೆಎಂಎಂ ನೇತೃತ್ವದ ಸರಕಾರ ರಾಜ್ಯವನ್ನು ಲೂಟಿ ಮಾಡಿದೆ. ಜನರಿಂದ ಲೂಟಿ ಮಾಡಿದ ಹಣವನ್ನು ಜನರಿಗೆ ಹಿಂದಿರುಗಿಸುತ್ತೇವೆ. ಇದು ಮೋದಿಯ ಗ್ಯಾರೆಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಧನ್‌ಬಾದ್‌ನಲ್ಲಿ ನಡೆದ ‘ವಿಜಯ ಸಂಕಲ್ಪ ಮಹಾರ‍್ಯಾಲಿ’ಯಲ್ಲಿ ಮಾತನಾಡಿದ ಅವರು, ದೇಶವು ʼಮೋದಿ ಗ್ಯಾರಂಟಿʼಯನ್ನು ನೆಚ್ಚಿಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.

ಇಂಡಿಯಾ ಮೈತ್ರಿಕೂಟವು ‘ಜಲ ಜೀವನ್ ಮಿಷನ್‌‘, ‘ಪಿಎಂ ಆವಾಸ್‌ ಯೋಜನೆ’ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಬಿಡುತ್ತಿಲ್ಲ. ಅದೊಂದು ಜನವಿರೋಧಿ ಮೈತ್ರಿಕೂಟ ಎಂದು ಅವರು ಕಿಡಿಕಾರಿದರು.

‘ರಾಜ್ಯದಲ್ಲಿ ಸುಲಿಗೆ ಪ್ರಮಾಣ ಮಿತಿ ಮೀರಿದೆ. ತುಷ್ಟೀಕರಣದ ಕಾರಣದಿಂದಾಗಿ ಒಳನುಸುಳುವಿಕೆ ಹೆಚ್ಚಳವಾಗಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News