ಟಿ-20 ಪ್ರದರ್ಶನ ಪಂದ್ಯ: ಮುತ್ತಯ್ಯ ಮುರಳೀಧರನ್ ಗೆ ವಿಕೆಟ್ ಒಪ್ಪಿಸಿದ ಸಚಿನ್ ತೆಂಡುಲ್ಕರ್

Update: 2024-01-18 16:16 GMT

ಸಚಿನ್ ತೆಂಡುಲ್ಕರ್ ,  ಮುತ್ತಯ್ಯ ಮುರಳೀಧರನ್ | Photo: X \ @PatelCricinfo

ಹೊಸದಿಲ್ಲಿ: ತಮ್ಮ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಹಾಗೂ ಆಫ್ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಹಲವು ಬಾರಿ ಮುಖಾಮುಖಿಯಾಗಿದ್ದಾರೆ. ವನ್ ವರ್ಲ್ಡ್-ವನ್ ಫ್ಯಾಮಿಲಿ ಟಿ-20 ಪ್ರದರ್ಶನ ಪಂದ್ಯದಲ್ಲಿ ಆಡಲು ಈ ಇಬ್ಬರು ಕ್ರಿಕೆಟ್ ಐಕಾನ್ ಗಳು ಗುರುವಾರ ಮೈದಾನಕ್ಕೆ ಮರಳಿದ್ದಾರೆ.

ತೆಂಡುಲ್ಕರ್ ವನ್ ವರ್ಲ್ಡ್ ಟೀಮ್ ಪರ 16 ಎಸೆತಗಳಲ್ಲಿ 27 ರನ್ ಗಳಿಸಿದರು. ಮಾಜಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುರಳೀಧರನ್ ತಾನೆಸೆದ ಮೊದಲ ಎಸೆತದಲ್ಲೇ ತೆಂಡುಲ್ಕರ್ ವಿಕೆಟನ್ನು ಉರುಳಿಸಿದರು. ಈ ಮೂಲಕ ಕರ್ನಾಟಕದ ಮುದ್ದೇನಹಳ್ಳಿಯ ಸಾಯಿ ಕೃಷ್ಣನ್ ಸ್ಟೇಡಿಯಮ್ ನಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಭಾರೀ ನಿರಾಸೆಗೊಳಿಸಿದರು.

ಮುತ್ತಯ್ಯ ಮುರಳೀಧರನ್, ಯುವರಾಜ್ ಸಿಂಗ್ ಹಾಗೂ ಮುಹಮ್ಮದ್ ಕೈಫ್ ವನ್ ಫ್ಯಾಮಿಲಿ ಟೀಮ್ನ ಸದಸ್ಯರಾಗಿದ್ದಾರೆ.

ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವನ್ ಫ್ಯಾಮಿಲಿ ತಂಡ 6 ವಿಕೆಟುಗಳ ನಷ್ಟಕ್ಕೆ 180 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವನ್ ವರ್ಲ್ಡ್ ಟೀಮ್ 7 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು.

ಮುರಳೀಧರನ್ ಎಸೆದ ಓವರ್ನಲ್ಲಿ ಮುನ್ನುಗ್ಗಿ ಆಡಲು ಯತ್ನಿಸಿದ ತೆಂಡುಲ್ಕರ್ ಅವರು ಮುಹಮ್ಮದ್ ಕೈಫ್ಗೆ ಕ್ಯಾಚ್ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News