ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶ ನನ್ನ ವೈಯಕ್ತಿಕ ಸೋಲು : ಡಿ.ಕೆ.ಶಿವಕುಮಾರ್‌

Update: 2024-06-07 11:07 GMT

ಡಿ.ಕೆ.ಶಿವಕುಮಾರ್‌ (PTI)

ಬೆಂಗಳೂರು : ಲೋಕಸಭಾ ಚುನಾಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದದಲ್ಲಿ ಡಿ.ಕೆ. ಸುರೇಶ್‌ ಸೋಲು ನನ್ನ ವೈಯಕ್ತಿಕ ಸೋಲು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼ ಬೆಂಗಳೂರು ಗ್ರಾಮಾಂತರ ಕ್ಷೇತ್ರದದಲ್ಲಿ ಬಿಜೆಪಿ- ಜೆಡಿಎಸ್‌ ನಾಯಕರು ಒಳ್ಳೆಯ ತಂತ್ರಗಾರಿಕೆ ಮಾಡಿದರು. ಜೆಡಿಎಸ್‌ ಬದಲಾಗಿ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಸಿದ ಅವರ ತಂತ್ರ  ಫಲಿಸಿದೆ. ಈ ಸೋಲು ನಿರೀಕ್ಷಿಸಿರಲಿಲ್ಲ. ಚುನಾವಾಣೆಯ ವಿಷಯದಲ್ಲಿ ನಾನು ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ. ಅದು ಹುಸಿಯಾಗಿದೆʼ ಎಂದು ವಿಶ್ಲೇಷಿಸಿದರು.

ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ದಕ್ಷಿಣ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದೆ. ಮಾಗಡಿ ಮತ್ತು ರಾಮನಗರದಲ್ಲಿ ನಮಗೆ ಒಳ್ಳೆಯ ಮುನ್ನಡೆ ಸಿಕ್ಕಿದೆ. ಕನಕಪುರದಲ್ಲಿ 60,000 ಮತಗಳ ಮುನ್ನಡೆ ನಿರೀಕ್ಷಿಸಿದ್ದೆವು, ಆದರೆ, 20 ಸಾವಿರ ಮತಗಳ ಮುನ್ನಡೆ ಮಾತ್ರ ಸಿಕ್ಕಿದೆ ನಮಗೆ ಬಂದಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News